Wednesday, June 10, 2026

ರಾಜಕೀಯ

ರಾಜಕೀಯ

ತೆನೆ ಹೊತ್ತ ಮಹಿಳೆಗೆ ಜೈ ಎಂದ ನಟಿ ಅಮೂಲ್ಯ ಜಗದೀಶ್

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ಸಿಗಲಿಲ್ಲ ಎಂದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈಗ ಚಿತ್ರ ನಟಿ ಅಮೂಲ್ಯರವರ ಮಾವ ಮಾಜಿ ಕಾರ್ಪೋರೇಟರ್ ರಾಮಚಂದ್ರ ಬೆಂಗಳೂರಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ,...
ರಾಜಕೀಯ

Breaking News : ಸಂಜೀವ ಮಠಂದೂರು ಆಯ್ಕೆ ಬದಲಾವಣೆಗೆ ಶಾ ಸೂಚನೆ ಸಾಧ್ಯತೆ ; ಕ್ಷೇತ್ರದಲ್ಲಿ ಕಾರ್ಯಕರ್ತರ ಆಕ್ರೋಶ ಹಿನ್ನಲೆ ‘ ಕೈಗೆ ಬಂದ ತುತ್ತು ಬಾಯಿಗಿಲ್ಲ ‘ – ಕಹಳೆ ನ್ಯೂಸ್

ಪುತ್ತೂರು : ಸೋಮವಾರ ಅಮಾವಾಸ್ಯೆಯ ದಿನ ಪುತ್ತೂರು ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ದ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ. ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ  ಸಂಜೀವ ಮಠಂದೂರು ಪುತ್ತೂರಿನ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಲೆ ಕಾರ್ಯಕರ್ತರು ಕಂಡಾಮಂಡಲವಾಗಿದ್ದರೆ, ಬಿಜೆಪಿ ಸೋಲು ನಿಶ್ಚಿತ ಎನ್ನುವ ಶ್ಟೇಟಸ್ಸ್ ಗಳನ್ನು ಹಾಕಿದ್ದಾರೆ. ಕಳೆದ ಭಾರಿ ಸಂಜೀವ ಮಠಂದೂರು ಪುತ್ತೂರು ಕ್ಷೇತ್ರದಿಂದ ಸ್ಪರ್ದಿಸಿದ್ದರು ಮತ್ತು ಹಾಲಿ  ಶಾಸಕಿ ಶಕುಂತಲ ಟಿ ಶೆಟ್ಟಿಯವರ ವಿರುದ್ದ 4300...
ರಾಜಕೀಯ

ನಾನು ಭಾರತೀಯಳು ಎನ್ನುದಕ್ಕೆ ನಾಚಿಕೆಯಾಗುತ್ತಿದೆ ಎಂದ ಪ್ರತಿಭಾ ಕುಳಾಯಿಗೆ ಸಮಾಜಿಕ ಜಾಲತಾಣಗಳಲ್ಲಿ ಚಳಿಬಿಡಿಸಿದ ಹಿಂದೂಪರ ಸಂಘಟನೆಗಳು – ಕಹಳೆ ನ್ಯೂಸ್

ಮಂಗಳೂರು: ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ನಾನು ಭಾರತೀಯಳು ಎನ್ನುವುದಕ್ಕೆ ನಾಚಿಕೆಯಾಗುತ್ತಿದೆ. ಕಥುವಾದಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣವನ್ನು ಖಂಡಿಸಿ, ಆ ಬಾಲಕಿಯ ಹೆಸರನ್ನು ತನ್ನ ಮಗಳು ಪೃಥ್ವಿ ಹೆಸರಿನ ಜತೆ ಸೇರಿಸಿ ಕರೆಯುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಹೇಳಿಕೆ ನೀಡಿದ್ದಾರೆ. Prathibha Kulai ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಭಾರತೀಯಳು ಎನ್ನುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಹೇಳಿರುವುದಕ್ಕೆ ನನ್ನ ವಿರುದ್ಧ...
ರಾಜಕೀಯ

ಬೆಳ್ತಂಗಡಿಯಲ್ಲಿ ಬದಲಾವಣೆಯ ಪರ್ವ ; ಹರೀಶ್ ಪೂಂಜ ಗೆಲವು ಖಚಿತ – ಕಹಳೆ ನ್ಯೂಸ್

ಬೆಳ್ತಂಗಡಿ : ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿದೆ. ಸಮಾಜಿಕ ಜಾಲತಣಗಳಲ್ಲಿ #VoteForHarishPoonja ಟ್ರೆಂಡಿಗ್ : Harish Poonja ಅಭ್ಯರ್ಥಿ ಘೋಷಣೆಯಾಗಿ ಕೇವಲ ಎರಡು ಮೂರು ಘಂಟೆಯಲ್ಲಿ #VoteForHarishPoonja ಹ್ಯಾಶ್ ಟ್ಯಾಗ್ ಟ್ರಂಡ್ ಆಗಿ ಬದಲಾವಣೆಯಾಗಿದೆ. ಬೆಳ್ತಂಗಡಿಯ ಬಹುತೇಕ 80% ಯುವಕ, ಮತದಾರರ ವಾಟ್ಸಾಪ್ ಗಳಲ್ಲಿ ಹರೀಶ್ ಪೂಂಜಾರ ಪರವಾಗಿ ಡಿಪಿ, ಸ್ಟೇಟಸ್ ಬೀಳ ತೊಡಗಿದೆ. ಕಹಳೆ ನ್ಯೂಸ್ ಸಮೀಕ್ಷೆಯಲ್ಲಿ...
ರಾಜಕೀಯ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ದಲಿತ ಮಿತ್ರ ಬಿರುದು

ಲಕ್ನೋ : ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ಇಂದು ಶನಿವಾರ ಇಲ್ಲಿನ ಅಂಬೇಡ್ಕರ್‌ ಮಹಾಸಭಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ "ದಲಿತ ಮಿತ್ರ'' ಬಿರುದನ್ನು ನೀಡಿ ಸಮ್ಮಾನಿಸಿತು.  ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್‌, "ಬಿಜೆಪಿ ಸರಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದಲಿತರ ವಿಮೋಚನೆ ಮತ್ತು  ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ; ಗ್ರಾಮೀಣ ಪ್ರದೇಶಗಳಲ್ಲಿ ಸರಕಾರ ಈಗಾಗಲೇ 40 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದೆ' ಎಂದು ಹೇಳಿದರು. ದಲಿತರ ಉನ್ನತಿಗಾಗಿ ಡಾ....
ರಾಜಕೀಯ

ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಕಾರ್ಪೋರೇಟರ್ ಪ್ರತಿಭಾ ಕುಳಾಯಿ

ಮಂಗಳೂರು, ಏ 14: ನಗರದ ಮಹಿಳಾ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯ ಬಿಜೆಪಿ ಪಕ್ಷವು, ಕಾಂಗ್ರೆಸ್ ಪಕ್ಷದ ವಿರುದ್ದ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಪ್ರತಿಭಾ ಕುಳಾಯಿ ಅವರ ಹೆಸರು ಮತ್ತು ಭಾವಚಿತ್ರ ಬಳಸಿದ್ದರು. ಈ ಹಿನ್ನೆಲೆ ಪ್ರತಿಭಾ ಕುಳಾಯಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಶೋಭಾ ಕರಂದ್ಲಾಜೆ, ರವಿಶಂಕರ್ ಪ್ರಸಾದ್ ಹೀಗೆ ಐವರು ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. Prathibha Kulai ತನ್ನ...
ರಾಜಕೀಯ

ಮನೆಯಲ್ಲಿ ಮಕ್ಕಳಿದ್ದಾರೆ.. ಬಿಜೆಪಿ, ಸಂಘ ಪರಿವಾರದವರು ಮನೆಗೆ ಪ್ರವೇಶಿಸಬಾರದು – ಭುಗಿಲೆದ್ದ ಪ್ರತಿಭಟನೆ

ತಿರುವನಂತಪುರ : ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಅಪ್ರಾಪ್ತೆ ಮಗುವಿನ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ ಘಟನೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆ ಕೇರಳದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆದಿದ್ದು, ಘಟನೆಯನ್ನು ಖಂಡಿಸಿದ್ದಾರೆ. ನಮ್ಮ ಮನೆಯಲ್ಲಿ ಮಕ್ಕಳಿದ್ದಾರೆ. ಹಾಗಾಗಿ ನಮ್ಮ ಮನೆಗೆ ಸಂಘ ಪರಿವಾರದವರು ಬರಬಾರದು ಎಂದು ಪೋಸ್ಟರ್ ಅಂಟಿಸಿದ್ದಾರೆ. ತಿರುವನಂತಪುರ ಜಿಲ್ಲೆಯ ಕಳಮಚ್ಚಳ್ ಎಂಬ ಗ್ರಾಮದಲ್ಲಿ ಹಲವಾರು ಮನೆಯ ಮುಂದು...
1 227 228 229 230 231 232
Page 229 of 232