Saturday, May 9, 2026

ರಾಜಕೀಯ

ರಾಜಕೀಯ

ಮಂಗಳೂರು ಗೋಲಿಬಾರ್ : ನೌಶಿನ್ ಕುಟುಂಬಕ್ಕೆ ಮಾಜಿ ಸಿಎಂ ಹೆಚ್ಡಿಕೆ 5 ಲಕ್ಷ ರೂ. ಚೆಕ್ ವಿತರಣೆ-ಕಹಳೆ ನ್ಯೂಸ್

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಇಬ್ಬರು ಮೃತಪಟ್ಟಿದ್ದರು. ಇಂದು ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ. ಮಂಗಳೂರಿನಲ್ಲಿ ಗೋಲಿಬಾರ್ ಬಲಿಯಾದ ಕುದ್ರೋಳಿಯ ಯುವಕ ನೌಶೀನ್ ಮನೆಗೆ ಭೇಟಿ ನೀಡಿ ನೌಶಿನ್ ಕುಟುಂಬಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಐದು ಲಕ್ಷ ರೂ. ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ, ಬಿ.ಎಂ.ಫಾರೂಕ್, ಜೆಡಿಎಸ್ ದಕ್ಷಿಣ...
ರಾಜಕೀಯ

ಡಿ.23ರಂದು ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ-ಕಹಳೆ ನ್ಯೂಸ್

ಮಂಗಳೂರು, ಡಿ.22: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.23ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಿಶೇಷ ವಿಮಾನದಲ್ಲಿ ಮಂಗಳೂರು ತಲುಪುವ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ 6 ಗಂಟೆಗೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ....
ರಾಜಕೀಯ

Flashback 2019: ಕರ್ನಾಟಕದಲ್ಲಿ ನಡೆದ ಪ್ರಮುಖ ಘಟನೆಗಳು-ಕಹಳೆ ನ್ಯೂಸ್

21ನೇ ಶತಮಾನದ ಮೊದಲ ದಶಕದ ಕೊನೆಯ ವರ್ಷ ಕನ್ನಡಿಗರ ಪಾಲಿಗೆ ಸಿಹಿಗಿಂತ ಕಹಿ ಹಾಗೂ ಗೊಂದಲಗಳನ್ನು ಸೃಷ್ಟಿಸಿದ್ದೇ ಹೆಚ್ಚು. ವರ್ಷಂಪೂರ್ತಿ ರಾಜಕೀಯ ಮೇಲಾಟ ಹಾಗೂ ಪ್ರವಾಹವೇ ಹೆಚ್ಚು ಸದ್ದು ಮಾಡಿತು. ಸರ್ಕಾರ ರಚನೆ ಕಸರತ್ತು, ರಾಜಕೀಯ ಪಕ್ಷಗಳ ಕಿತ್ತಾಟ, ಚುನಾವಣೆ ಹಾಗೂ ಮಹಾ ಪ್ರವಾಹವು ಪದೇಪದೆ ಸುದ್ದಿ ಮಾಡಿತು. ವರ್ಷಾಂತ್ಯದವರೆಗೂ ಇದೇ ವಿಚಾರ ಚರ್ಚೆಯಲ್ಲಿದೆ. ಆದರೆ ವರ್ಷದ ಕೊನೆಗೆ ಮಂಗಳೂರಿನ ಗೋಲಿಬಾರ್ ಹಾಗೂ ಪೌರತ್ವದ ಕಿಚ್ಚು ಕರ್ನಾಟಕ ರಾಜಕೀಯಕ್ಕೆ ಹೊಸದಾಗಿ...
ರಾಜಕೀಯ

ಯು.ಟಿ.ಖಾದರ್ ಅವರ ಹೇಳಿಕೆಯೇ ಜಿಲ್ಲೆಯಲ್ಲಿ ಗಲಭೆಗೆ ಕಾರಣ ; ಕಡಬ ಪ್ರಖಂಡ ವಿ.ಹಿಂ.ಪ.ನಿಂದ ಯು.ಟಿ.ಖಾದರ್ ವಿರುದ್ದ ದೂರು – ಕಹಳೆ ನ್ಯೂಸ್

ಕಡಬ: ಕುಟೀಲ ರಾಜಕೀಯ ತಂತ್ರಗಾರಿಕೆಯಿಂದ ಕಾಂಗ್ರೆಸ್ ದೇಶದ ಮುಸ್ಲಿಂರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ, ಈ ನಡುವೆ ಶಾಸಕ ಯು.ಟಿ.ಖಾದರ್ ಅವರ ಹೇಳಿಕೆಯಿಂದ ಪ್ರೇರೆಪಿತವಾಗಿ ಗಲಭೆ ನಡೆಯುತ್ತಿದೆ, ಈ ಗಲಭೆಗೆ ಯು.ಟಿ.ಖಾದರ್ ಅವರೇ ಕಾರಣ, ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಡಬ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ಠಾಣೆಗೆ ದೂರು ನೀಡಲಾಯಿತು. ಕಡಬ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ ದೂರು ನೀಡಿದ್ದು,...
ರಾಜಕೀಯ

ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟ ಅಬ್ದುಲ್ ಜಲೀಲ್ , ನೌಶಿರ್ ಅಂತ್ಯಸಂಸ್ಕಾರ ; ಬಿಗಿ ಬಂದೋಬಸ್ತ್ – ಮಂಗಳೂರು ಶಾಂತಿಯುತ – ಕಹಳೆ ನ್ಯೂಸ್

ಮಂಗಳೂರು, ಡಿ 20  : ಗುರುವಾರ ನಡೆದ ಹಿಂಸಾಚಾರದ ಪ್ರತಿಭಟನೆಯ ವೇಳೆ ಪೊಲೀಸರ ಗುಂಡೇಟಿಗೆ ಮೃತಪಟ್ಟ ಇಬ್ಬರ ಮೃತದೇಹಗಳ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ನಡೆಸಲಾಯಿತು.               ಬಂದರ್‍ ಕಂದುಕದ ಅಬ್ದುಲ್ ಜಲೀಲ್ ಅವರ ಮೃತದೇಹವನ್ನು ಝೀನತ್ ಬಕ್ಷ್ ಮಸೀದಿ ಆವರಣದಲ್ಲಿ ಹಾಗೂ ಕುದ್ರೋಳಿಯ ನೌಶಿರ್ ಮೃತದೇಹವನ್ನು ಕುದ್ರೋಳಿ ಜುಮಾ ಮಸೀದಿ ಆವರಣದಲ್ಲಿ ದಫನ ಮಾಡಲಾಯಿತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಮೃತದೇಹಗಳನ್ನು ಜಿಲ್ಲಾಧಿಕಾರಿ ಸಿಂಧೂ...
ರಾಜಕೀಯ

Breaking News : ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಗೋಲಿಬಾರ್ ವೀಡಿಯೋ ಹಳೇಯದ್ದು, ಶುದ್ದ ಸುಳ್ಳು ; ಮಂಗಳೂರಿಗೂ ಆ ವೀಡಿಯೋಕ್ಕೂ ಸಂಬಂಧವೇ ಇಲ್ಲ – ಕಹಳೆ ನ್ಯೂಸ್

ಮಂಗಳೂರು : ನಗರದಲ್ಲಿ ನಿನ್ನೆ ನಡೆದ ಗೋಲಿಬಾರ್ ಸಂದರ್ಭದಲ್ಲಿ ಮಂಗಳೂರಿನದ್ದೇ ಎಂದು ಹರಿದಾಡುತ್ತಿರುವ ಪ್ರಮುಖ ವೀಡಿಯೋ ಒಂದು ಮಂಗಳೂರಿನದ್ದೇ ಅಲ್ಲ‌ ಎಂಬ Exclusive ಮಾಹಿತಿ ಕಹಳೆ ನ್ಯೂಸ್ ಗೆ ಲಭಿಸಿದೆ.   ನವೆಂಬರ್ 1 ರಂದು YouTube ಗೆ Upload ಆಗಿತ್ತು ವೈರಲ್ ಆದ ವೀಡಿಯೋ..! ಎಂಬ ಮಾಹಿತಿ ಲಭಿಸಿದ್ದು, ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂಬ ಕಳಕಳಿಯ ವಿನಂತಿ ನಮ್ಮದ್ದು.   https://youtu.be/T1i1sTTsXF8...
ರಾಜಕೀಯ

ಉಪ್ಪಿನಂಗಡಿಯಲ್ಲಿ ಅಘೋಷಿತ ಬಂದ್ ; ಕುಪ್ಪೆಟ್ಟಿಯಲ್ಲಿ ಬಸ್‌ಗಳಿಗೆ ಕಲ್ಲು, ಓರ್ವನ ವಶ ; ಮಠದಲ್ಲಿ ಲಾಠಿ ಬೀಸಿ ಗುಂಪು ಚದುರಿಸಿದ ಪೊಲೀಸರು – ಕಹಳೆ ನ್ಯೂಸ್

ಉಪ್ಪಿನಂಗಡಿ: ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಯಿಂದ ಜಿಲ್ಲೆಯಾದ್ಯಂತ ಮೂಡಿದ ಭೀತಿಯ ವಾತಾವರಣದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಡಿ.20 ರಂದು ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಯಿತು. ಬೆಳ್ತಂಗಡಿ ತಾಲೂಕಿನ ಬಂಗಾರಕಟ್ಟೆಯ ಕಾರಂದೂರು ಎಂಬಲ್ಲಿ ಒಂದು ಬಸ್‌ಗೆ ಹಾಗೂ ಕುಪ್ಪೆಟ್ಟಿಯಲ್ಲಿ ನಾಲ್ಕು ಬಸ್‌ಗಳಿಗೆ ದುಷ್ಕರ್ಮಿಗಳು ಹಾನಿಯೆಸಗಿದರು. ಡಿ.20 ರಂದು ಬೆಳಗ್ಗಿನಿಂದಲೇ ಪೇಟೆಯಲ್ಲಿ ಜನಸಂಖ್ಯೆ ತೀರಾ ವಿರಳವಿತ್ತಲ್ಲದೇ, ಬಹುತೇಕ ಖಾಸಗಿ ವಾಹನಗಳು ರಸ್ತೆಗಿಳಿಯದ್ದರಿಂದ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಯಿತು. ರಸ್ತೆಗಳು ಬಿಕೋ...
ರಾಜಕೀಯ

ಮಂಗಳೂರಿನಲ್ಲಿ ಇಬ್ಬರ ಸಾವಿಗೆ ಯು ಟಿ ಖಾದರ್ ಅವರೇ ನೇರ ಕಾರಣ ; ಸಂಸದ ಪ್ರತಾಪ ಸಿಂಹ – ಕಹಳೆ ನ್ಯೂಸ್

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ನಾಗರಿಕರ ಆತ್ಮಕ್ಕೆ ಶಾಂತಿಕೋರುತ್ತೇನೆ, ಇದಕ್ಕೆ ಮಾಜಿ ಸಚಿವ ಯು ಟಿ ಖಾದರ್ ಅವರ ಹೇಳಿಕೆಯೇ ನೇರ ಕಾರಣ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ರಾಜ್ಯಾದ್ಯಂತ ಗಲಭೆಯ ವಾತಾವರಣ ಸೃಷ್ಟಿಯಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯದಲ್ಲಿ ಸೆಕ್ಷನ್ 144...
1 123 124 125 126 127 232
Page 125 of 232