ಇಬ್ಬರು ಸರಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ-ಕಹಳೆ ನ್ಯೂಸ್
ಬೆಳಗಾವಿ: ಬೆಳಗಾವಿಯ ಉಪನೊಂದಣಿ ಇಲಾಖೆಯ ಪ್ರಭಾರಿ ಉಪನೊಂದಣಾಧಿಕಾರಿ ಸಚಿನ್ ಮಂಡೇದ ಹಾಗೂ ರಾಯಬಾಗ ತಾಲೂಕಿನ ನಿಲಜಿಯ ಪಶುವೈದ್ಯಕೀಯ ಇಲಾಖೆಯ ಪರಿವೀಕ್ಷಕ ಸಂಜಯ ದುರ್ಗಷ್ಣವರ ಅವರ ಮನೆಯ ಮೇಲೆ ಶುಕ್ರವಾರ(ಜ.31) ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆಯ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ....







