ವಿಷ ಬೀಜ ಬಿತ್ತಿ, ಭಾವನೆ ಒಡೆಯುವ ಕೆಲಸ : ಶಾಸಕ ಯಶಪಾಲ್ ಸುವರ್ಣ -ಕಹಳೆ ನ್ಯೂಸ್
ಬ್ರಹ್ಮಾವರ: ವಿಶ್ವದ ಒಂದೇ ಒಂದು ಹಿಂದೂ ರಾಷ್ಟ್ರವಾದ ಭಾರತದಲ್ಲಿ ಇರುವ ಹಿಂದುತ್ವದ ಭಾವನೆಯನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ವಿಷಬೀಜ ಬಿತ್ತಲಾಗುತ್ತಿದೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು. ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಬ್ರಹ್ಮಾವರ ತಾಲ್ಲೂಕು ವತಿಯಿಂದ ಗುರುವಾರ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲಿನ ವೈಚಾರಿಕ ದಾಳಿಯನ್ನು ಖಂಡಿಸಿ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಶ್ರದ್ಧೆಯ ಕೇಂದ್ರಗಳ ವಿರುದ್ಧ ಷಡ್ಯಂತರ ಮಾಡುವವರಿಗೆ ಸಾಗರದ...







