ಅಂಬಿಕಾ ಪದವಿ ಕಾಲೇಜಿನಲ್ಲಿ ತತ್ತ್ವಜ್ಞಾನಿಗಳ ದಿನಾಚರಣೆ : “ಶಂಕರಾಚಾರ್ಯರರ ಬಗೆಗಿನ ಅನುಸಂಧಾನ ಅಗತ್ಯ” : ಡಾ.ವಿನಾಯಕ ಭಟ್ಟ ಗಾಳಿಮನೆ – ಕಹಳೆ ನ್ಯೂಸ್
ಪುತ್ತೂರು: ದೇವ ಜೀವರ ಭಾವೈಕ್ಯವನ್ನು ಜಗತ್ತಿಗೆ ತೋರಿಕೊಟ್ಟವರು ಶಂಕರಾಚಾರ್ಯರು. ವಿವಿಧ ಆಚರಣೆಗಳ ಮೂಲಕ ವೈರುಧ್ಯಗಳಲ್ಲಿ ಬದುಕುತ್ತಿದ್ದ ಜನರಿಗೆ ಪಂಚಾಯತನ ಪೂಜೆಯ ಕಲ್ಪನೆಯನ್ನು ನೀಡಿ ಇಡಿಯ ಹಿಂದೂ ಸಮಾಜವನ್ನು ಒಗ್ಗೂಡಿಸಿದವರು. ಅವರನ್ನು ಅರಿಯುವುದೇ ನಮ್ಮ ಬದುಕಿಗೆ ಹೊಸ ದಾರಿದೀಪವಾಗುತ್ತದೆ. ರಾಷ್ಟ್ರ, ಭಕ್ತಿ ಹಾಗೂ ತತ್ತ್ವಜ್ಞಾನದ ನೆಲೆಯಲ್ಲಿ ಭಗವಾನ್ ಶಂಕರರ ಅನುಸಂಧಾನ ನಡೆಯಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ...







