ಮನೆ ಮೇಲ್ಛಾವಣಿ ಕುಸಿದು ಇಬ್ಬರಿಗೆ ಗಾಯ ಓರ್ವ ಅಪಾಯದಿಂದ ಪಾರು-ಕಹಳೆ ನ್ಯೂಸ್
ಸುಬ್ರಹ್ಮಣ್ಯ: ಮಣ್ಣಿನ ಗೋಡೆಯ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ಮೂವರಲ್ಲಿ ಇಬ್ಬರು ಗಾಯಗೊಂಡ, ಓರ್ವರು ಅಪಾಯದಿಂದ ಪಾರಾದ ಘಟನೆ ಮಂಗಳವಾರ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿ ಸಂಭವಿಸಿದೆ. ನೆಟ್ಟಣದ ಕೃಷ್ಣ ಕುಟ್ಟಿ (65) ಹಾಗೂ ಅವರ ಮಗಳು ಶಾಂತಿ ಕೃಷ್ಣ (35) ಗಾಯಗೊಂಡಿದ್ದು, ಕೃಷ್ಣ ಕುಟ್ಟಿ ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ. ಕೃಷ್ಣ ಕುಟ್ಟಿ ಅವರ ಮನೆಯವರು ಮಂಗಳವಾರ ಮಧ್ಯಾಹ್ನ ಊಟ ಮಾಡುತ್ತಿದ್ದ ವೇಳೆ...







