ಉಜ್ಜೀವನ ಹಿರಿಯ ನಾಗರಿಕ ಬಡಾವಣೆಯ ಸೌಲಭ್ಯಗಳನ್ನೊಳಗೊಂಡ ವಾಣಿಜ್ಯ ಸಂಕೀರ್ಣ ದ ಶಂಕುಸ್ಥಾಪನೆ ಕಾರ್ಯಕ್ರಮ– ಕಹಳೆ ನ್ಯೂಸ್
ಕೆಮ್ಮಾರ, ಉಪ್ಪಿನಂಗಡಿಯಲ್ಲಿ ಉಜ್ಜೀವನ ಹಿರಿಯನಾಗರಿಕರ ಬಡಾವಣೆಯನ್ನು ನಿರ್ಮಿಸುತ್ತಿರುವ ದ್ವಾರಕಾ ಸಮೂಹ ಸಂಸ್ಥೆಯು ವಿಷು ಹಬ್ಬದ ಶುಭದಿನದಂದು ಭೂಮಿ ಪೂಜೆಯ ಮುಖೇನ ಬಡಾವಣೆಯ ಸೌಲಭ್ಯಗಳನ್ನೊಳಗೊಂಡ ವಾಣಿಜ್ಯ ಸಂಕೀರ್ಣ ದ ಶಂಕುಸ್ಥಾಪನೆ ಯನ್ನು ನಡೆಸಿತು. ಈ ಸಂದರ್ಭದಲ್ಲಿ ನೆರೆದ ಸ್ಥಳೀಯ ಹಿತೈಷಿಗಳು, ಉಜ್ಜೀವನ ಹಿರಿಯನಾಗರಿಕರ ಬಡಾವಣೆ ನಿರ್ಮಾಣದಿಂದ ಸ್ಥಳೀಯ ಉದ್ಯೋಗ ಅವಕಾಶದೊಂದಿಂಗೆ ಸುತ್ತಮುತ್ತಲಿನ ಪರಿಸರದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಉಜ್ಜೀವನ ಯೋಜನೆಗೆ ಶುಭವನ್ನು ಹಾರೈಸಿದರು. ಸ್ಥಳೀಯ...







