ಕರಾವಳಿ ಕಾವಲು ಪಡೆ; ಸಮುದ್ರ ತೀರದಲ್ಲಿ ವಿಶೇಷ ಕಣ್ಗಾವಲು-ಕಹಳೆ ನ್ಯೂಸ್
ಉಡುಪಿ: ಪಹಲ್ಗಾಮ್ನಲ್ಲಿ ನಡೆದ ಘಟನೆ ಹಾಗೂ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕರಾವಳಿ ತೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನೌಕಾಪಡೆ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಜಂಟಿಯಾಗಿ ಭದ್ರತಾ ಕಾರ್ಯಾ ಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮುದ್ರದಲ್ಲಿ ಗಸ್ತು ಕಾರ್ಯಾಚರಣೆಯ ಅವಧಿಯನ್ನು ಹೆಚ್ಚಿಸಲಾಗಿದೆ. ಮೂರು ಜಿಲ್ಲೆಯ ಕರಾವಳಿ ತೀರದ 324 ಕಿ.ಮೀ.ನಲ್ಲಿ 1 ಕಿ.ಮೀ.ಗೆ ತಲಾ ಇಬ್ಬರಂತೆ ಸಿಬಂದಿ ನಿಯೋಜನೆಗೊಳಿಸಲಾಗಿದೆ. ರೆಸಾರ್ಟ್ಗಳಲ್ಲಿ ತಪಾಸಣೆ: ರಜಾ ಸಮಯವಾದ ಕಾರಣ ಸಮುದ್ರ ತೀರದ ಸಮೀಪವಿರುವ ರೆಸಾರ್ಟ್ಗಳಿಗೆ...







