Saturday, April 25, 2026
ಸುದ್ದಿ

ಪ್ರಧಾನಿ ಮೋದಿಗೆ ರುದ್ರಾಕ್ಷಿ ಮಾಲೆ ನೀಡಿದ ಬಾಲಿವುಡ್ ನಟ ಅನುಪಮ ಖೇರ್ – ಕಹಳೆ ನ್ಯೂಸ್

ನವದೆಹಲಿ- ಬಾಲಿವುಡ್‌ನ ಹಿರಿಯ ನಟ ಅನುಪಮ ಖೇರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ರುದ್ರಾಕ್ಷಿ ಮಾಲೆಯನ್ನು ನೀಡುವ ಮೂಲಕ ಅಭಿನಂದಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ನಿನ್ನೆ ಸಂಜೆ ಫೋಟೋಗಳನ್ನು ಪ್ರಕಟಿಸಿರುವ ಖೇರ್ ಅವರು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ತುಂಬಾ ಸಂತೋಷ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದ ಜನರಿಗಾಗಿ ಮೋದಿ ಅವರು ಹಗಲು-ರಾತ್ರಿ ಕೆಲಸ ಮಾಡುವ ಮೂಲಕ ಇತರರಿಗೆ ಸ್ಪೋರ್ತಿದಾಯಕವಾಗಿದ್ದಾರೆ. ಭೇಟಿಯ ವೇಳೆ ತಮ್ಮ ತಾಯಿ ಪ್ರಧಾನಿ ಅವರಿಗಾಗಿ ನೀಡಿದ್ದ ರುದ್ರಾಕ್ಷಿ ಮಾಲೆಯನ್ನು ಹಸ್ತಾಂತರಿಸಿದ್ದಾಗಿ ತಿಳಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.