Sunday, June 14, 2026
ಬೆಂಗಳೂರು

ಪಕ್ಷಕ್ಕೆ ದಕ್ಕೆತರುವ ಮಾತುಗಳನ್ನು ತೀವ್ರವಾಗಿ ಖಂಡಿಸಿದ ಸಿ.ಎಂ ಬಿ.ಎಸ್ ಯಡಿಯೂರಪ್ಪ – ಕಹಳೆ ನ್ಯೂಸ್

ಬೆಂಗಳೂರು : ಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬುಧವಾರ ನೆರವೇರಿತು ನೂತನವಾಗಿ
ಸಚಿವ ಸಂಪುಟ ಸೇರಿಕೊಂಡ ನೂತನ ಏಳು ಸಚಿವರ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಅಸಮಾಧಾನ ತಲೆದೋರಿದ್ದು, ಈ ಹಿನ್ನಲೆಯಲ್ಲಿ ಪಕ್ಷದ ವಿರುದ್ಧ ಮಾತಾನಾಡುವವರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಖಡಕ್ ವಾರ್ನಿಂಗ್ ನೀಡಿದ್ದರೆ.

ಜಾಹೀರಾತು

ಸುದ್ದಿಗಾರರೊಂದಿಗೆ ಮಾತಾನಾಡಿ, ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನ ಇರುವ ಶಾಸಕರು ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿ ಪ್ರಯೋಜನವಿಲ್ಲ, ಈ ವಿಚಾರದಲ್ಲಿ ಬೇಸರವಿದ್ದರೆ ದೆಹಲಿ ವರಿಷ್ಠರ ಜತೆ ಮಾತನಾಡಲಿ ಇಲ್ಲವೇ ದೂರು ನೀಡಲಿ. ಪಕ್ಷಕ್ಕೆ ಧಕ್ಕೆ ತರುವ ಮಾತುಗಳು ಶಾಸಕರಿಂದ ಬೇಡ, ಎನ್ನುತ್ತಲೇ ಎಚ್ಚರಿಕೆ ಮಾತುಗಳಿಗೆ ಜಗ್ಗಲ್ಲ ಎಂದು ಸ್ಪಷ್ಟ ಸಂದೇಶವನ್ನು ಸಿಎಂ ರವಾನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು