Recent Posts

Sunday, April 26, 2026
ಸುದ್ದಿ

ದ.ಕ ಜಿಲ್ಲೆಗೆ ನೂತನ ಎಸ್.ಪಿಯಾಗಿ “ಎನ್ ಕೌಂಟರ್ ಸ್ಪೆಶಲಿಸ್ಟ್” ಬಿ. ಆರ್ ರವಿಕಾಂತೇ ಗೌಡ – ಕಹಳೆ ನ್ಯೂಸ್

 

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಹೆಚ್. ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿ. ಹೆಚ್. ಸುಧೀರ್ ಕುಮಾರ್ ರೆಡ್ಡಿ ಅವರ ಜಾಗಕ್ಕೆ ಬೆಳಗಾವಿ ಎಸ್ಪಿಯಾಗಿದ್ದ ಬಿ. ಆರ್ ರವಿಕಾಂತೇ ಗೌಡ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.

ಬಿ. ಆರ್ ರವಿಕಾಂತೇ ಗೌಡ ಅವರು ಎನ್ ಕೌಂಟರ್ ಸ್ಪೆಶಲಿಸ್ಟ್ ಎಂದೇ ಹೆಸರು ಪಡೆದಿದ್ದಾರೆ. ಭೂಗತ ಜಗತ್ತಿನ ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲಿ ಡಿಸಿಪಿಯಾಗಿದ್ದ ಸಂದರ್ಭ ಮೂರು ಕುಖ್ಯಾತ ರೌಡಿಗಳನ್ನು ಮಟ್ಟ ಹಾಕಿದ್ದರು. ಕೋಮು ಗಲಭೆ – ಕೋಮು ದ್ವೇಷವನ್ನು ಮತ್ತು ಭೂಗತ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಇವರು ಪ್ರವೀಣರು.

ವರದಿ – ಕಹಳೆ ನ್ಯೂಸ್