
ಪುತ್ತೂರು : ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ, ಓಜಾಲ ನಿವಾಸಿ ಭವಿತ್ ರಾಜ್ ಎಂಬವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗೆ ಉದ್ಯಮಿ, ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ನೆರವಾಗಿದ್ದಾರೆ. ತನ್ನ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರೀಟೇಬಲ್ ಟ್ರಸ್ಟ್ ನ, ದರ್ಬೆಯ ಕಛೇರಿಯಲ್ಲಿ ಭವಿತ್ ರಾಜ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಅನೇಕ ವರ್ಷಗಳಿಂದ ಬಡವರ ಪಾಲಿನ ದೇವರಾಗಿ, ನೊಂದವರಿಗೆ ಅಶೋಕ್ ಕುಮಾರ್ ರೈ ಅವರು ನೆರವಾಗುತ್ತಿದ್ದಾರೆ.










