
ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ, ಕಲ್ಲಡ್ಕ ಇದರ ಗೋಳ್ತಮಜಲು ಗ್ರಾಮವಿಕಾಸ ಸಮಿತಿ ವತಿಯಿಂದ ಸಸಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ತಾಲೂಕು ಪಂಚಾಯತ್ ಸದಸ್ಯರು ಮತ್ತು ಗ್ರಾಮ ವಿಕಾಸ ಸಮಿತಿಯ ಪ್ರಮುಖರಾದ ಮಹಾಬಲ ಆಳ್ವರವರು ಗಿಡಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗೋಳ್ತಮಜಲು ಮಂಡಲ ಗ್ರಾಮ ವಿಕಾಸ ಸಂಯೋಜಕರಾದ ಗೋಪಾಲ್ ಶ್ರೀಮಾನ್ ಹಾಗೂ ಗ್ರಾಮ ಸಂಯೋಜಕರಾದ ಜಿನ್ನಪ್ಪ ಶ್ರೀಮಾನ್ ಇವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ವಸಂತಿಕುಮಾರಿ ಮಾತಾಜಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.








