
ಪೆರ್ನೆ: ವಾಯುವ್ಯ ಕರ್ನಾಟಕ ಸಾರಿಗೆ ಬಸ್ವೊಂದು ಚರಂಡಿಗೆ ಬೀಳುವ ಅನಾಹುತ ತಪ್ಪಿದ ಘಟನೆ ಉಪ್ಪಿನಂಗಡಿ ಪೆರ್ನೆಯ ಎಎಂ ಅಡಿಟೋರಿಯಂ ಬಳಿ ನಡೆದಿದೆ. ಕುಕ್ಕೇ ಸುಬ್ರಹ್ಮಣ್ಯದಿಂದ ಮಂಗಳೂರು ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ನಿರ್ಮಾಣವಾದ ಚರಂಡಿಯಲ್ಲಿ ಎದುರುಗಡೆ ಚಕ್ರ ಸಿಲುಕಿ ಕೊಂಡಿತು. ಇದರಿಂದ ಸ್ವಲ್ಪದರಲ್ಲಿ ದೊಡ್ಡ ಅಪಘಾತ ತಪ್ಪಿದೆ.











