
ಉಳ್ಳಾಲದಲ್ಲಿ ಕಟ್ಟಡದಿಂದ ಬಿದ್ದು ಯುವಕ ಅನುಮಾನಸ್ಪದ ಸಾವನ್ನಪ್ಪಿದ್ದಾನೆ. ಮೃತನನ್ನು ಅಂಬಿಕಾರೋಡ್ ನಿವಾಸಿ ನಿಶಾನ್ ಎಂದು ಹೇಳಲಾಗುತ್ತಿದೆ.
ನಿಶಾನ್ ಮಾದಕ ವ್ಯಸನಿಯಾಗಿದ್ದು, ಮಾನಸಿಕ ಖನ್ನತೆಗೆ ಒಳಗಾಗಿದ್ದ. ಇನ್ನು ಮೃತ ದೇಹದ ಕೈ ಮುರಿದ್ದಿದ್ದು ತಲೆಗೆ ಯಾವುದೇ ಹಾನಿಯಾಗಿರುವುದು ಪತ್ತೆಯಾಗಿಲ್ಲ.

ಹತ್ತಿರದ ಭಗವತಿ ಕಾಂಪ್ಲೆಕ್ಸ್ನಿಂದ ಬಿದ್ದು ಸತ್ತಿರುವ ಶಂಕೆಯನ್ನ ಸ್ಥಳೀಯರು ವ್ಯಕ್ತ ಪಡಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.









