Friday, April 24, 2026
ಸುದ್ದಿ

ಮುಳ್ಳುಹಂದಿ ಬೇಟೆಯಾಡಲು ಹೋಗಿ ಚಿರತೆ ಸಾವು -ಕಹಳೆ ನ್ಯೂಸ್

ಚಾಮರಾಜನಗರ: ಮುಳ್ಳುಹಂದಿ  ಬೇಟೆಯಾಡಲು ಹೋಗಿ ಚಿರತೆ  ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ  ತಾಲೂಕಿನ ಬೊಮ್ಮನಹಳ್ಳಿ ಬಳಿ ನಡೆದಿದೆ.


ಮುಳ್ಳುಹಂದಿ ಬೇಟೆಗೆ ಚಿರತೆ ಮುಂದಾಗಿದೆ. ಈ ವೇಳೆ, ಚಿರತೆ ಕಾಲು ಹಾಗೂ ಬಾಯಿಯ ಭಾಗಕ್ಕೆ ಮುಳ್ಳು ಚುಚ್ಚಿಕೊಂಡಿದೆ. ಮುಳ್ಳುಹಂದಿ ಜೊತೆ ಕಾದಾಡಿ ಚಿರತೆ ಮೃತಪಟ್ಟಿದೆ.

ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು