
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷಕ್ಕೆ ಇಂದು 39ನೇ ದಿನ. ಆರನೇ ವಾರಕ್ಕೆ ಕಾಲಿಟ್ಟಿರುವ ಈ ಯುದ್ಧದಿಂದ ಭಾರತಕ್ಕೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದೆ. ಇದಕ್ಕೆ ಭಾರತದ ವಿಮಾನಯಾನ ವಲಯವೂ ಹೊರತಾಗಿಲ್ಲ. ಕಚ್ಚಾತೈಲದ ಬೆಲೆ ಏರಿಕೆ, ಹಲವು ದೇಶಗಳ ವಾಯುಪ್ರದೇಶ ಮುಚ್ಚುವಿಕೆ ಸೇರಿದಂತೆ ಭಾರತದ ಏವಿಯೇಷನ್ ಉದ್ಯಮಕ್ಕೆ 2,500 ಕೋಟಿ ರೂ. ನಷ್ಟ ಉಂಟಾಗಿದೆ.
ವಿಮಾನಯಾನ ಸಂಸ್ಥೆ ನಷ್ಟಕ್ಕೆ ಕಾರಣ ಏನು?
– ಗಲ್ಫ್ನ ಹಲವು ರಾಷ್ಟçಗಳಿಂದ ತಮ್ಮ ವಾಯುಪ್ರದೇಶ ಬಂದ್.
– ದುಬೈ, ಅಬುಧಾಬಿಯಲ್ಲಿ ಗಲ್ಫ್ ವಿಮಾನಯಾನ ಸಂಸ್ಥೆಗಳಿಗೆ ಆದ್ಯತೆ.
– ಕೆಲವು ಮಾರ್ಗಗಳಲ್ಲಿ ಏಕಮುಖ ಪ್ರಯಾಣಿಕರ ದಟ್ಟಣೆ.
– ಇದರಿಂದಾಗಿ ವಿಮಾನಗಳು ಖಾಲಿಯಾಗಿ ವಾಪಸ್ ಹಿನ್ನೆಲೆ ನಷ್ಟ.
– ಪಶ್ಚಿಮ ಏಷ್ಯಾದಲ್ಲಿ ಕೆಲವು ವಾಯುಪ್ರದೇಶ ಮುಚ್ಚಲಾಗುತ್ತಿದೆ.
– ಇದರಿಂದ ಶೇ.40-50 ವಿಮಾನ ವಿಳಂಬ ಹಿನ್ನೆಲೆ ಇಂಧನ ವೆಚ್ಚ.
– ಜೆಟ್ ಇಂಧನ ಬೆಲೆ ಹೆಚ್ಚಿಸಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ..
ಹೀಗೆ ಹಲವು ಕಾರಣಗಳಿಂದ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು, ಯುದ್ಧ ಹೀಗೆ ಮುಂದುವರಿದರೆ ಭಾರತದ ಕಂಪನಿಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗುವ ಸಾಧ್ಯತೆಗಳಿದೆ.











