
ವಿಶ್ವಕಪ್ ಕ್ರಿಕೆಟಿನ ಭಾರತ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಪಂದ್ಯ ನಿಗದಿ ಪ್ರಕಾರ ಇಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದ ಇನ್ನೂ ಟಾಸ್ ಪ್ರಕ್ರಿಯೆ ನಡೆದಿಲ್ಲ.
ಭಾರತ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಇಲ್ಲಿಯವರೆಗೆ ಕಪ್ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಹೀಗಾಗಿ ಯಾರೂ ಗೆದ್ದರೂ ಮೊದಲ ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ.
ಮಧ್ಯಾಹ್ನ 3:30 ಆದರೂ ಸ್ಟೇಡಿಯಂ ಸುತ್ತಲೂ ಮಳೆಯಾಗುತ್ತಿದೆ. ಒಂದು ವೇಳೆ ಮಳೆ ನಿಂತರೆ ಕನಿಷ್ಠ 20 ಓವರ್ಗಳನ್ನು ಆಡಿಸಲಾಗುತ್ತದೆ. ಇಂದು ಆಟವನ್ನು ಆಡಿಸಲು ಸಾಧ್ಯವಾಗದೇ ಇದ್ದರೆ ನಾಳೆಗೆ ಪಂದ್ಯ ಮುಂದೂಡಲಾಗುತ್ತದೆ. ಮೀಸಲು ದಿನವೂ ಮಳೆಯಿಂದ ರದ್ದಾದರೆ ಎರಡೂ ತಂಡವನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.









