ಸೆ.5ರಂದು ಪುತ್ತೂರಿನ ಜಿಎಲ್ ಒನೆ ಮಾಲ್ ನಲ್ಲಿ ತುಳು ಕಬಿಕೂಟೊ 2025- ಕಹಳೆ ನ್ಯೂಸ್

ಪುತ್ತೂರು: ತುಳು ಕೂಟೊ ಪುತ್ತೂರು, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ವತಿಯಿಂದ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪ್ರಯೋಜಕತ್ವದಲ್ಲಿ ‘ತುಳು ಕಬಿಕೂಟೊ’ 2025 ಇದೇ ಬರುವ ಸೆ. 5ರಂದು ಪುತ್ತೂರಿನ ಜಿಎಲ್ ಒನ್ ಮಾಲ್ ನ ಮೊದಲನೇ ಮಹಡಿಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಾಲಕರಾದ ಬಲರಾಮ ಆಚಾರ್ಯ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಕನ್ನಡ ಕವಿ, ಸಾಹಿತಿ, ಕವಿತಾ ಅಡೂರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಒನ್ನಡ ಕವಿ, ಸಾಹಿತಿ ಅಕ್ಷತಾರಾಜ್ ಪೆರ್ಲ ಅವರು ವಹಿಸಲಿದ್ದಾರೆ.









