
ಉಪ್ಪಿನಂಗಡಿ : ನಗರದ ಪೆರ್ನೆ ಎಂಬಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ರಾಜ್ ಗ್ರೂಪ್ಸ್ ನ ಕೃಷ್ಣರಾಜ್ ಅವರ ಮಾಲಕತ್ವದ ಎಚ್.ಪಿ. ಪ್ಯೂಯೆಲ್ ಸ್ಟೇಷನ್ಗೆ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಇಂದು ಬೇಟಿ ನೀಡಿ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಸಂಸ್ಥೆಯ ಮಾಲಕರು ಹಾಗೂ ಎಚ್.ಪಿ. ಪ್ಯೂಯೆಲ್ ನ ಡೀಲರ್ ಆಗಿರುವ ಹರೀಶ್ ಭಟ್ ನಡುಸಾರು , ಕಹಳೆ ನ್ಯೂಸ್ನ ಪ್ರಧಾನ ಸಂಪಾದಕರು ಶ್ಯಾಮ್ ಸುದರ್ಶನ್ ಹೊಸಮೂಲೆ ಅವರು ಉಪಸ್ಥಿತರಿದ್ದರು.

ನೂತನ ಪ್ಯೂಯೆಲ್ ಸ್ಟೇಷನ್ ಜನರ ಸೇವೆ ಮಾಡುತ್ತಾ, ಸಮಾಜದಲ್ಲಿ ಒಂದು ಒಳ್ಳೆಯ ಉದ್ಯಮವಾಗಿ ಮೂಡಿಬರಲಿ ಎಂದು ಪೇಜಾವರ ಶ್ರೀ ಶುಭ ಹಾರೈಸಿದರು. ಪೇಜಾವರ ಶ್ರೀಗಳನ್ನು ಕೃಷ್ಣರಾಜ್ ಹಾಗೂ ವೈಶಾಲಿ ಕೃಷ್ಣರಾಜ್ ಫಲಪುಷ್ಪ ನೀಡಿ ಗೌರವಿಸಿದರು.









