Friday, April 24, 2026
ಕೊಡಗುಜಿಲ್ಲೆದಕ್ಷಿಣ ಕನ್ನಡಸುದ್ದಿ

‘ ಸನಾತನ ರಾಷ್ಟ್ರ ‘ ದ ಜಯ ಘೋಷದ ಜೊತೆಗೆ ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆ ಸೇರಿದಂತೆ ಕರ್ನಾಟಕದಾತ್ಯಂತ 5000ಕ್ಕೂ ಅಧಿಕ ಹಿಂದುತ್ವನಿಷ್ಠ ರಿಂದ ಗೋವಾದತ್ತ ಪ್ರಯಾಣ-ಕಹಳೆ ನ್ಯೂಸ್

ಮಾನವ ಕುಲದ ಪರಮಕಲ್ಯಾಣ ಮತ್ತು ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯನಿರತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ 83 ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ ಫೊಂಡಾ ಗೋವಾದಲ್ಲಿ ಮೇ 17 ರಿಂದ 19 ರ ವರೆಗೆ ‘ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ‘ ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವವನ್ನು ಫರ್ಮಾಗುಡಿ , ಫೊಂಡಾ ,ಗೋವಾ ದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಉತ್ಸವದಲ್ಲಿ ಸಹಭಾಗಿ ಆಗಲು ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಯ ೪೦೦ಕ್ಕೂ ಅಧಿಕ ಸನಾತನ ಸಂಸ್ಥೆಯ ಸಾಧಕರು, ಹಿಂದೂ ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ‘ ಸನಾತನ ರಾಷ್ಟ್ರ ‘ ದ ಜಯ ಘೋಷದ ಜೊತೆಗೆ ವಾಹನಗಳ ಮೂಲಕ ಗೋವಾದ ಕಡೆಗೆ ಪ್ರಯಾಣ ಮಾಡಿದ್ದಾರೆ. ಎಲ್ಲಾ ಹಿಂದುತ್ವ ನಿಷ್ಠರು ಕೇಸರಿ ಟೋಪಿ ಧರಿಸಿದ್ದರು ಮತ್ತು ವಾಹನಗಳು/ಬಸ್ಸು/ರೈಲು/ವಿಮಾನದ ಮೇಲೆ ಕೇಸರಿ ಧ್ವಜ ಹಾರಿಸಿರುವುದರಿಂದ ಸಂಪೂರ್ಣ ವಾತಾವರಣದಲ್ಲಿ ಚೈತನ್ಯ ಮತ್ತು ಶಕ್ತಿಯ ಸಂಚಾರ ಆಗುತ್ತಿತ್ತು.