
ತಂದೆಯವರಿಂದ ನಿಂದನೆಗೆ ಒಳಗಾಗುತ್ತೀರಿ, ತಪ್ಪು ನಿರ್ಧಾರಗಳು ಬೇಡ
ಉದ್ಯೋಗದಲ್ಲಿ ಬಡ್ತಿ, ಉತ್ತಮವಾದ ಸ್ಥಾನಮಾನ ದೊರೆಯಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ(ಪಾಡ್ಯ), ವಿಶಾಖ ನಕ್ಷತ್ರ ನಂತರ ಅನುರಾಧ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ
ಮೇಷ ರಾಶಿ

- ಕೆಲಸ ಕಾರ್ಯಗಳು ವಿಳಂಬ ಆಗಲು ನಿಮ್ಮ ಬೇಜವಾಬ್ದಾರಿ ಕಾರಣ ಆಗಲಿದೆ
- ಅಲಂಕಾರಿಕ ವಸ್ತುಗಳಿಗೆ ಖರ್ಚು ಮಾಡುತ್ತೀರಿ
- ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಮಿಶ್ರಫಲವಿರುವ ಈ ದಿನ ಅಷ್ಟೊಂದು ಚೆನ್ನಾಗಿಲ್ಲ
- ತಂದೆಯವರಿಂದ ನಿಂದನೆಗೆ ಒಳಗಾಗುತ್ತೀರಿ
- ತಪ್ಪು ನಿರ್ಧಾರಗಳು ಬೇಡ
- ಕುಲದೇವತಾ ಆರಾಧನೆ ಮಾಡಿ
ವೃಷಭ

- ವ್ಯಾವಹಾರಿಕವಾಗಿ ಲಾಭವಿದೆ
- ಶತ್ರುಭಾದೆ ದೂರ ಆಗಲಿದೆ
- ಬೇರೆಯವರ ಕೆಟ್ಟ ದೃಷ್ಟಿಯಿಂದ ಬೇಸರ ಆಗಲಿದೆ
- ಕುಟುಂಬದವರೇ ಆ ರೀತಿ ಯೋಚಿಸಿರುತ್ತಾರೆ
- ಮುಖ್ಯವಾದ ಕೆಲಸದಲ್ಲಿ ಪ್ರಗತಿ ಇದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಿಥುನ

- ಉದ್ಯೋಗದಲ್ಲಿ ಬಡ್ತಿ ಸಿಗಲಿದೆ
- ಉತ್ತಮವಾದ ಸ್ಥಾನಮಾನ ದೊರೆಯಲಿದೆ
- ಗೌರವ ಮತ್ತು ಪ್ರಶಸ್ತಿಗಳಿಗೆ ಅವಕಾಶವಿದೆ
- ಶರೀರದಲ್ಲಿ ಆಲಸ್ಯ ಉಂಟಾಗಬಹುದು
- ಪರಸ್ಥಳ ವಾಸ ಸಂಭವ
- ಮನೆಯಲ್ಲಿ ಹೊಂದಾಣಿಕೆ ಇರಲಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕಟಕ

- ಅನಿರೀಕ್ಷಿತವಾದ ಖರ್ಚು ಆಗಲಿದೆ
- ಮಾನಸಿಕ ಒತ್ತಡ ಇರಬಹುದು
- ಆಕಸ್ಮಿಕ ದುಃಖ ಉಂಟಾಗಬಹುದು
- ವೈಯಕ್ತಿಕವಾದ ವಿಚಾರದಲ್ಲಿ ಹಿನ್ನಡೆಯಾಗಬಹುದು
- ಮನೆಯಲ್ಲಿ ಹೊಂದಾಣಿಕೆಯ ಕೊರತೆ ಕಾಣಬಹುದು
- ತಂದೆ ಮಕ್ಕಳ ವಾಗ್ವಾದ ತಾರಕಕ್ಕೇರಬಹುದು
- ದುರ್ಗಾರಾಧನೆ ಮಾಡಿ
ಸಿಂಹ

- ಮಾತುಗಳಿಂದ ಸ್ನೇಹಿತರ ಮಧ್ಯೆ ಬಿರುಕು ಉಂಟಾಗಬಹುದು
- ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ
- ಸರ್ಕಾರಿ ಅಧಿಕಾರಿಗಳಿಗೆ ದೊಡ್ಡ ತೊಂದರೆಯಾಗಬಹುದು
- ರಾಜಕಾರಣಿಗಳಿಗೆ ಉತ್ತಮವಾದ ದಿನ
- ಮಾತೆಯರಿಗೆ ವಸ್ತ್ರಾಭರಣ ಪ್ರಾಪ್ತಿ
- ತಂದೆಯವರ ವ್ಯವಹಾರದಲ್ಲಿ ಪ್ರಗತಿಯಿಂದ ಸಂತಸ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ

- ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ
- ಬೇರೆಯವರಲ್ಲಿ ವಿಶ್ವಾಸವಿರಿಸಿಕೊಳ್ಳಿ
- ಮಾನಸಿಕವಾದ ನೆಮ್ಮದಿ ಕಡಿಮೆ
- ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು
- ನಿಮ್ಮ ಯಾವುದೇ ರೀತಿಯ ನೋವು ಬೇರೆಯವರಿಗೆ ಗೊತ್ತಾಗೋದು ಬೇಡ
- ಮಕ್ಕಳಿಂದ ಬಹಳ ಹಿಂಸೆ ಪಡುತ್ತೀರಿ
- ಈಶ್ವರನ ಆರಾಧನೆ ಮಾಡಿ
ತುಲಾ

- ಮಾತಿನಿಂದ ಹಲವಾರು ಜನ ಆಕರ್ಷಿತರಾಗುತ್ತಾರೆ
- ಬೇರೆಯವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ
- ತಾಯಿಯವರಿಗೆ ತೊಂದರೆಯಾಗಬಹುದು
- ದಂಪತಿಗಳಲ್ಲಿ ಹೊಂದಾಣಿಕೆ ಇರಲಿ
- ವಾಹನ ವಿಚಾರವಾಗಿ ಚರ್ಚೆ ನಡೆಯಲಿದೆ
- ಇಂದು ಕಾರ್ಯ ನಿಮಿತ್ತ ಓಡಾಟವನ್ನು ಮಾಡಬೇಕಾಗತ್ತೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ

- ಆಸ್ತಿ ವಿಚಾರಕ್ಕೆ ಕಲಹ ಆಗಬಹುದು
- ನಿಮ್ಮ ಸ್ವಭಾವ ತಿದ್ದಬೇಕು ಅಂದರೆ ಬಹಳ ಕಷ್ಟ ಆಗಲಿದೆ
- ವಿವಾಹ ವಿಚಾರದಲ್ಲಿ ಮರೀಚಿಕೆಯಾಗಬಹುದು
- ಉದ್ಯೋಗ, ವಿದ್ಯೆ ಇದು ಯಾವುದು ಪ್ರಯೋಜನವಿಲ್ಲ
- ಆದಾಯವಿಲ್ಲ ಸಣ್ಣ ಪುಟ್ಟ ಖರ್ಚಿಗೂ ಕೂಡ ಕೈ ಚಾಚಿ ನಿಲ್ಲುವ ಸ್ಥಿತಿ
- ಮಹಿಳೆಯರು ಉದ್ಯೋಗದಲ್ಲಿದ್ದರೆ ಅವರಿಗೆ ಬಡ್ತಿ ಇದೆ
- ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ಧನಸ್ಸು

- ದ್ರವ್ಯ ಲಾಭದ ಸೂಚನೆ ಇದೆ
- ಕಾರ್ಯದಲ್ಲಿ ವಿಳಂಬ ಆಗಬಹುದು
- ರೋಗಬಾಧೆ ಕಾಡಬಹುದು
- ಪ್ರಿಯ ಜನರು ದೂರವಾಗುತ್ತಾರೆ
- ಸ್ತ್ರೀಯರಿಗೆ ಸ್ವಲ್ಪ ಸಮಸ್ಯೆ ಇರಲಿದೆ
- ಮನೆಯಲ್ಲಿ ಹೊಂದಾಣಿಕೆ ಇರಬೇಕು ತಾಳ್ಮೆಗೆಡಬಾರದು
- ಸಾಯಿಬಾಬರನ್ನು ಪ್ರಾರ್ಥನೆ ಮಾಡಿ
ಮಕರ

- ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತೀರಿ
- ಕೋರ್ಟು ವ್ಯವಹಾರದಲ್ಲಿ ಅಪಜಯ
- ನೆಮ್ಮದಿ ಇಲ್ಲದ ಜೀವನ ಮಾಡುತ್ತೀರಿ
- ಅನಾರೋಗ್ಯದಿಂದ ಬೇಸರ ಉಂಟಾಗಬಹುದು
- ಮಗ ಅಥವಾ ಮಗಳಿಂದ ತೊಂದರೆ ಆಗಬಹುದು
- ಸತಿ ಪತಿ ಕಲಹ ಮಿತಿ ಮೀರಬಹುದು
- ನವಗ್ರಹರನ್ನು ಆರಾಧನೆ ಮಾಡಿ
ಕುಂಭ

- ಸಂಪಾದನೆಗೆ ಹಲವಾರು ಮಾರ್ಗವಿದೆ
- ನಿಮ್ಮ ಜಾಣ್ಮೆ ಕೆಲಸ ಮಾಡಬೇಕು
- ವಿಪರೀತವಾದ ಖರ್ಚಿದೆ ಆಲೋಚನೆಯನ್ನು ಮಾಡಿ
- ವಿಷಾಹಾರದ ಭೀತಿ ಕಾಡಬಹುದು
- ಕುಟುಂಬದ ಸೌಖ್ಯವಿಲ್ಲ
- ದೇವತಾ ಕಾರ್ಯಕ್ಕೆ ವಿಘ್ನ ಆಗಬಹುದು
- ಪ್ರಯಾಣದಿಂದ ಆಪತ್ತಿದೆ ಎಚ್ಚರಿಕೆ ಇರಲಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಮೀನ

- ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು
- ಲೆಕ್ಕಾಚಾರದ ವ್ಯವಹಾರ ಒಳ್ಳೆಯದು ಆದರೆ ಸಂಸಾರವಲ್ಲ
- ಸ್ವಂತ ಪರಿಶ್ರಮದಿಂದ ಸಂಪಾದನೆ ಆಗಲಿದೆ
- ಗುರು ಹಿರಿಯರನ್ನು ಸಂದರ್ಶಿಸಿ ಶುಭವಿದೆ
- ಉತ್ತಮವಾದ ಗೌರವ ಪಡೆಯಲು ಅವಕಾಶವಿದೆ
- ಚಿಕ್ಕವರಿಂದ ಬುದ್ಧಿ ಹೇಳಿಸಿಕೊಳ್ಳುವಂತಹ ಪರಿಸ್ಥಿತಿ ಬರಬಹುದು
- ಋಣಮೋಚನ ಮಂಗಳ ಸ್ತೋತ್ರವನ್ನು ಶ್ರವಣ ಮಾಡಿ









