Friday, April 24, 2026
ಸುದ್ದಿ

ಉದ್ಯೋಗದಲ್ಲಿ ಬಡ್ತಿ, ಉತ್ತಮವಾದ ಸ್ಥಾನಮಾನ ದೊರೆಯಲಿದೆ; ಇಲ್ಲಿದೆ ರಾಶಿ ಭವಿಷ್ಯ! – ಕಹಳೆ ನ್ಯೂಸ್

ತಂದೆಯವರಿಂದ ನಿಂದನೆಗೆ ಒಳಗಾಗುತ್ತೀರಿ, ತಪ್ಪು ನಿರ್ಧಾರಗಳು ಬೇಡ

ಕೆಲಸ ಕಾರ್ಯಗಳು ವಿಳಂಬ ಆಗಲು ನಿಮ್ಮ ಬೇಜವಾಬ್ದಾರಿ ಕಾರಣ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಯೋಗದಲ್ಲಿ ಬಡ್ತಿ, ಉತ್ತಮವಾದ ಸ್ಥಾನಮಾನ ದೊರೆಯಲಿದೆ

 

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ(ಪಾಡ್ಯ), ವಿಶಾಖ ನಕ್ಷತ್ರ ನಂತರ ಅನುರಾಧ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ

ಮೇಷ ರಾಶಿ

  • ಕೆಲಸ ಕಾರ್ಯಗಳು ವಿಳಂಬ ಆಗಲು ನಿಮ್ಮ ಬೇಜವಾಬ್ದಾರಿ ಕಾರಣ ಆಗಲಿದೆ
  • ಅಲಂಕಾರಿಕ ವಸ್ತುಗಳಿಗೆ ಖರ್ಚು ಮಾಡುತ್ತೀರಿ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ಮಿಶ್ರಫಲವಿರುವ ಈ ದಿನ ಅಷ್ಟೊಂದು ಚೆನ್ನಾಗಿಲ್ಲ
  • ತಂದೆಯವರಿಂದ ನಿಂದನೆಗೆ ಒಳಗಾಗುತ್ತೀರಿ
  • ತಪ್ಪು ನಿರ್ಧಾರಗಳು ಬೇಡ
  • ಕುಲದೇವತಾ ಆರಾಧನೆ ಮಾಡಿ

ವೃಷಭ

  • ವ್ಯಾವಹಾರಿಕವಾಗಿ ಲಾಭವಿದೆ
  • ಶತ್ರುಭಾದೆ ದೂರ ಆಗಲಿದೆ
  • ಬೇರೆಯವರ ಕೆಟ್ಟ ದೃಷ್ಟಿಯಿಂದ ಬೇಸರ ಆಗಲಿದೆ
  • ಕುಟುಂಬದವರೇ ಆ ರೀತಿ ಯೋಚಿಸಿರುತ್ತಾರೆ
  • ಮುಖ್ಯವಾದ ಕೆಲಸದಲ್ಲಿ ಪ್ರಗತಿ ಇದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಉದ್ಯೋಗದಲ್ಲಿ ಬಡ್ತಿ ಸಿಗಲಿದೆ
  • ಉತ್ತಮವಾದ ಸ್ಥಾನಮಾನ ದೊರೆಯಲಿದೆ
  • ಗೌರವ ಮತ್ತು ಪ್ರಶಸ್ತಿಗಳಿಗೆ ಅವಕಾಶವಿದೆ
  • ಶರೀರದಲ್ಲಿ ಆಲಸ್ಯ ಉಂಟಾಗಬಹುದು
  • ಪರಸ್ಥಳ ವಾಸ ಸಂಭವ
  • ಮನೆಯಲ್ಲಿ ಹೊಂದಾಣಿಕೆ ಇರಲಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಅನಿರೀಕ್ಷಿತವಾದ ಖರ್ಚು ಆಗಲಿದೆ
  • ಮಾನಸಿಕ ಒತ್ತಡ ಇರಬಹುದು
  • ಆಕಸ್ಮಿಕ ದುಃಖ ಉಂಟಾಗಬಹುದು
  • ವೈಯಕ್ತಿಕವಾದ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಮನೆಯಲ್ಲಿ ಹೊಂದಾಣಿಕೆಯ ಕೊರತೆ ಕಾಣಬಹುದು
  • ತಂದೆ ಮಕ್ಕಳ ವಾಗ್ವಾದ ತಾರಕಕ್ಕೇರಬಹುದು
  • ದುರ್ಗಾರಾಧನೆ ಮಾಡಿ

ಸಿಂಹ

  • ಮಾತುಗಳಿಂದ ಸ್ನೇಹಿತರ ಮಧ್ಯೆ ಬಿರುಕು ಉಂಟಾಗಬಹುದು
  • ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ
  • ಸರ್ಕಾರಿ ಅಧಿಕಾರಿಗಳಿಗೆ ದೊಡ್ಡ ತೊಂದರೆಯಾಗಬಹುದು
  • ರಾಜಕಾರಣಿಗಳಿಗೆ ಉತ್ತಮವಾದ ದಿನ
  • ಮಾತೆಯರಿಗೆ ವಸ್ತ್ರಾಭರಣ ಪ್ರಾಪ್ತಿ
  • ತಂದೆಯವರ ವ್ಯವಹಾರದಲ್ಲಿ ಪ್ರಗತಿಯಿಂದ ಸಂತಸ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ
  • ಬೇರೆಯವರಲ್ಲಿ ವಿಶ್ವಾಸವಿರಿಸಿಕೊಳ್ಳಿ
  • ಮಾನಸಿಕವಾದ ನೆಮ್ಮದಿ ಕಡಿಮೆ
  • ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಬೇಕು
  • ನಿಮ್ಮ ಯಾವುದೇ ರೀತಿಯ ನೋವು ಬೇರೆಯವರಿಗೆ ಗೊತ್ತಾಗೋದು ಬೇಡ
  • ಮಕ್ಕಳಿಂದ ಬಹಳ ಹಿಂಸೆ ಪಡುತ್ತೀರಿ
  • ಈಶ್ವರನ ಆರಾಧನೆ ಮಾಡಿ

ತುಲಾ

  • ಮಾತಿನಿಂದ ಹಲವಾರು ಜನ ಆಕರ್ಷಿತರಾಗುತ್ತಾರೆ
  • ಬೇರೆಯವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ
  • ತಾಯಿಯವರಿಗೆ ತೊಂದರೆಯಾಗಬಹುದು
  • ದಂಪತಿಗಳಲ್ಲಿ ಹೊಂದಾಣಿಕೆ ಇರಲಿ
  • ವಾಹನ ವಿಚಾರವಾಗಿ ಚರ್ಚೆ ನಡೆಯಲಿದೆ
  • ಇಂದು ಕಾರ್ಯ ನಿಮಿತ್ತ ಓಡಾಟವನ್ನು ಮಾಡಬೇಕಾಗತ್ತೆ
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆಸ್ತಿ ವಿಚಾರಕ್ಕೆ ಕಲಹ ಆಗಬಹುದು
  • ನಿಮ್ಮ ಸ್ವಭಾವ ತಿದ್ದಬೇಕು ಅಂದರೆ ಬಹಳ ಕಷ್ಟ ಆಗಲಿದೆ
  • ವಿವಾಹ ವಿಚಾರದಲ್ಲಿ ಮರೀಚಿಕೆಯಾಗಬಹುದು
  • ಉದ್ಯೋಗ, ವಿದ್ಯೆ ಇದು ಯಾವುದು ಪ್ರಯೋಜನವಿಲ್ಲ
  • ಆದಾಯವಿಲ್ಲ ಸಣ್ಣ ಪುಟ್ಟ ಖರ್ಚಿಗೂ ಕೂಡ ಕೈ ಚಾಚಿ ನಿಲ್ಲುವ ಸ್ಥಿತಿ
  • ಮಹಿಳೆಯರು ಉದ್ಯೋಗದಲ್ಲಿದ್ದರೆ ಅವರಿಗೆ ಬಡ್ತಿ ಇದೆ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ಧನಸ್ಸು

  • ದ್ರವ್ಯ ಲಾಭದ ಸೂಚನೆ ಇದೆ
  • ಕಾರ್ಯದಲ್ಲಿ ವಿಳಂಬ ಆಗಬಹುದು
  • ರೋಗಬಾಧೆ ಕಾಡಬಹುದು
  • ಪ್ರಿಯ ಜನರು ದೂರವಾಗುತ್ತಾರೆ
  • ಸ್ತ್ರೀಯರಿಗೆ ಸ್ವಲ್ಪ ಸಮಸ್ಯೆ ಇರಲಿದೆ
  • ಮನೆಯಲ್ಲಿ ಹೊಂದಾಣಿಕೆ ಇರಬೇಕು ತಾಳ್ಮೆಗೆಡಬಾರದು
  • ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ಮಕರ

  • ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತೀರಿ
  • ಕೋರ್ಟು ವ್ಯವಹಾರದಲ್ಲಿ ಅಪಜಯ
  • ನೆಮ್ಮದಿ ಇಲ್ಲದ ಜೀವನ ಮಾಡುತ್ತೀರಿ
  • ಅನಾರೋಗ್ಯದಿಂದ ಬೇಸರ ಉಂಟಾಗಬಹುದು
  • ಮಗ ಅಥವಾ ಮಗಳಿಂದ ತೊಂದರೆ ಆಗಬಹುದು
  • ಸತಿ ಪತಿ ಕಲಹ ಮಿತಿ ಮೀರಬಹುದು
  • ನವಗ್ರಹರನ್ನು ಆರಾಧನೆ ಮಾಡಿ

ಕುಂಭ

  • ಸಂಪಾದನೆಗೆ ಹಲವಾರು ಮಾರ್ಗವಿದೆ
  • ನಿಮ್ಮ ಜಾಣ್ಮೆ ಕೆಲಸ ಮಾಡಬೇಕು
  • ವಿಪರೀತವಾದ ಖರ್ಚಿದೆ ಆಲೋಚನೆಯನ್ನು ಮಾಡಿ
  • ವಿಷಾಹಾರದ ಭೀತಿ ಕಾಡಬಹುದು
  • ಕುಟುಂಬದ ಸೌಖ್ಯವಿಲ್ಲ
  • ದೇವತಾ ಕಾರ್ಯಕ್ಕೆ ವಿಘ್ನ ಆಗಬಹುದು
  • ಪ್ರಯಾಣದಿಂದ ಆಪತ್ತಿದೆ ಎಚ್ಚರಿಕೆ ಇರಲಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನ 

  • ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು
  • ಲೆಕ್ಕಾಚಾರದ ವ್ಯವಹಾರ ಒಳ್ಳೆಯದು ಆದರೆ ಸಂಸಾರವಲ್ಲ
  • ಸ್ವಂತ ಪರಿಶ್ರಮದಿಂದ ಸಂಪಾದನೆ ಆಗಲಿದೆ
  • ಗುರು ಹಿರಿಯರನ್ನು ಸಂದರ್ಶಿಸಿ ಶುಭವಿದೆ
  • ಉತ್ತಮವಾದ ಗೌರವ ಪಡೆಯಲು ಅವಕಾಶವಿದೆ
  • ಚಿಕ್ಕವರಿಂದ ಬುದ್ಧಿ ಹೇಳಿಸಿಕೊಳ್ಳುವಂತಹ ಪರಿಸ್ಥಿತಿ ಬರಬಹುದು
  • ಋಣಮೋಚನ ಮಂಗಳ ಸ್ತೋತ್ರವನ್ನು ಶ್ರವಣ ಮಾಡಿ