Recent Posts

Monday, June 8, 2026
ಸುದ್ದಿ

ಉರಿಲಿಂಗಪೆದ್ದಿ ಶ್ರೀ ಟಿಪ್ಪುವಂಶಸ್ಥನಿರಬೇಕು | ಗೋಹತ್ಯೆ ಸಹಿಸುದಿಲ್ಲ, PFI ಕೊಲೆಕಟುಕ ಸಂಘಟನೆ – ಸುನೀಲ್ ಕುಮಾರ್.

ಕಾರ್ಕಳ : ಪಿ.ಎಸ್.ಐ. ಸಮಾವೇಶದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಇತಿಹಾಸ ತಿಳಿಯದೆ ಮಾತನಾಡುವವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಜ್ಞಾನ ಪ್ರಕಾಶ ಶ್ರೀ ಎಲ್ಲೋ ಟಿಪ್ಪು ವಂಶದಲ್ಲಿ ಹುಟ್ಟಿರಬೇಕು. ಇಲ್ಲಾ ತಲೆ ಕೆಟ್ಟಿರಬೇಕು ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಗೋ ಹತ್ಯೆ ವಿಚಾರ ಬಂದಾಗ ಹಿಂದೂ ಸಮಾಜ ಅದನ್ನು ಎಂದೂ ಸಹಿಸುವುದಿಲ್ಲ. ರಾಘವೇಶ್ವರ ಶ್ರೀ ಪ್ರಕರಣಕ್ಕೆ ಕೋರ್ಟು ತೀರ್ಪು ನೀಡುತ್ತದೆ ಲಲಿತಾ ನಾಯಕ್ ನೀಡುವ ಅವಶ್ಯಕತೆ ಇಲ್ಲ. ಮತ್ತು ಮಂಗಳೂರಿನ ಶರತ್ ಮಡಿವಾಳ, ಮಡಿಕೇರಿಯ ಕುಟ್ಟಪ್ಪ, ರಾಜು, ಪ್ರವೀಣ್ ಪೂಜಾರಿ ಹೀಗೆ ಹತ್ತಾರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ಆರೋಪ ಹೊತ್ತಿರುವ ಪಿ.ಎಫ್.ಐ. ಕೊಲೆಕಟುಕ ಸಂಘಟನೆ. ಎಂದು ಅವರು ಕಹಳೆ ನ್ಯೂಸ್ ಹೇಳಿಕೆ ನೀಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು