Wednesday, May 1, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 7ನೇತಿಂಗಳ ಶ್ರಮದಾನ – ಕಹಳೆ ನ್ಯೂಸ್

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಎರಡನೇಆವೃತ್ತಿಯ ಏಳನೇ ತಿಂಗಳ ಸ್ವಚ್ಛತಾ ಅಭಿಯಾನಕ್ಕೆ ಕೊಟ್ಟಾರಚೌಕಿಯ ಫ್ಲೈಓವರ್ ಪರಿಸರದಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿಅವರ ಸಾನಿಧ್ಯದಲ್ಲಿಎಂ.ಆರ್.ಪಿ.ಎಲ್. ಸಂಸ್ಥೆಯಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಹೆಚ್.ವಿ ಪ್ರಸಾದ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದಕಿರಣ್‌ಕೋಡಿಕಲ್ ಹಸಿರು ನಿಶಾನೆ ತೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್‌ಕೋಡಿಕಲ್ “ನಮ್ಮ ನಗರದಸ್ವಚ್ಛತೆ ಮತ್ತು ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿರಾಮಕೃಷ ಮಿಷನ್ ಬಹಳಷ್ಟು ಶ್ರಮವಹಿಸುತ್ತಿದೆ.ಕೊಟ್ಟಾರ ಫ್ಲೈಓವರ್‌ಗೆ ಹಿಂದೆ ಪೈಂಟ್ ಮಾಡಲಾಗಿತ್ತು ಇದೀಗ ಮತ್ತೆ ಮಾಸಿದ ವರ್ಣಚಿತ್ರಗಳಿಗೆ ಜೀವಕಳೆ ತರುವ ಪ್ರಯತ್ನ ಮಾಡಲಾಗುತ್ತಿದೆ, ಇದಕ್ಕಾಗಿರಾಮಕೃಷ್ಣ ಮಠದ ಸ್ವಾಮೀಜಿಯವರಿಗೆ ಹಾಗೂ ಎಲ್ಲಾ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದರು. ಈ ಸಂದರ್ಭದಲ್ಲಿಯೋಧರಾದ ಬೆಳ್ಳಾಲ ಗೋಪಿನಾಥ್‌ರಾವ್, ಕಮಲಾಕ್ಷ ಪೈ ಮತ್ತುರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ,ದಕ್ಷಿಣಕನ್ನಡ ಜಿಲ್ಲಾ ಪ0ಚಾಯತ್ ಮುಂಭಾಗದಲಿ, 2019ರಲ್ಲಿ ಮಹಾತ್ಮಗಾಂಧೀಜಿಯವರ 150 ಜನ್ಮವರ್ಷಾಚರಣೆ ಪ್ರಯುಕ್ತ ಲೋಕಾರ್ಪಣೆಗೊಂಡ ನಗರದ ಮೊತ್ತಮೊದಲ ಮಿಯಾವಾಕಿ ನಗರಾರಣ್ಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಮಿಯಾವಾಕಿಅರಣ್ಯದಮುಂಭಾಗದಲ್ಲಿದ್ದಎಲೆಗಳನ್ನು ನೈಸರ್ಗಿಕಗೊಬ್ಬರವನ್ನಾಗಿ ಮಾಡಲು ಸಂಗ್ರಹಿಸಲಾಯಿತು, ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ವಿಲೇವಾರಿ ಮಾಡಲಾಯಿತು. ತಾರಾನಾಥ ಆಳ್ವ, ಯೋಗೀಶ್ ಪ್ರಭು, ವಿಜೇಶ್‌ದೇವಾಡಿಗ, ಸಚಿನ್‌ಶೆಟ್ಟಿ ನಲ್ಲೂರು, ವಸಂತಿ ನಾಯಕ್, ಹಿಮ್ಮತ್ ಸಿಂಗ್, ನಿತೇಶ್‌ಕಲ್ನಾಡ್, ಲೋಕೇಶ್ ಮುಂತಾದವರನ್ನೊಳಗೊ0ಡ ತಂಡ ಈ ಕಾರ್ಯವನ್ನುಕೈಗೊಂಡಿತು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಮಿಯಾವಾಕಿ ಹಿಂಭಾಗದಲ್ಲಿದ್ದ ಮದ್ಯದ ಬಾಟಲಿಗಳು, ತ್ಯಾಜ್ಯ, ಬಟ್ಟೆಗಳು, ಪ್ಲಾಸ್ಟಿಕ್ ಮುಂತಾದವಸ್ತುಗಳ ರಾಶಿಯನ್ನುಶೇಷಪ್ಪಅಮೀನ್, ಸೌರಜ್ ಮಂಗಳೂರು, ಮೆಹಬೂಬ್, ಸುನಂದಾ, ಶಿವರಾಮ್, ಪ್ರಕಾಶ್‌ಎಸ್. ಟಿ, ರಾಜೀವಿ ಚಂದ್ರಶೇಖರ್, ಆಕೃತಿ ಭಟ್, ಡಾ. ಕೃಷ್ಣ ಶರಣ್, ಅವಿನಾಶ್ ಮುಂತಾದವರನ್ನೊಳಗೊ0ಡ ತಂಡದ ಸದಸ್ಯರು ಸ್ವಚ್ಛಗೊಳಿಸಿದರು. ಸ್ವಯಂಸೇವಕರಾದ ವಿಠ್ಠಲದಾಸ್ ಪ್ರಭು, ಸತ್ಯನಾರಾಯಣ, ಉದಯ್ ಕೆ. ಪಿ, ಮುಕೇಶ್ ಆಳ್ವ, ಸಜಿತ್‌ಅವರತಂಡ ಮಿಯಾವಕಿಯ ಒಳಭಾಗದಲ್ಲಿದ್ದ ಪ್ಲಾಸ್ಟಿಕ್‌ಬಾಟಲಿಗಳನ್ನು ತೆರವುಗೊಳಿಸಿ, ಗಿಡಗಳಿಗೆ ನೀರೆರೆದರುಹಾಗೂಆವರಣಗೋಡೆಯನ್ನು ಸ್ವಚ್ಛಗೊಳಿಸಿದರು.

ಫ್ಲೈಓವರ್ ಮರು ಪೈಂಟಿ0ಗ್‌ಕಾಮಗಾರಿಗೆ ಚಾಲನೆ

ಕೊಟ್ಟಾರಚೌಕಿಯಲ್ಲಿ 2019 ರಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪದ ಅಂಗವಾಗಿ, ಸಂಪೂರ್ಣ ಕೊಟ್ಟಾರ ಚೌಕಿ ಫ್ಲೈಓವರ್‌ನ ಕೆಳಭಾಗದ 30,000 ಚದರ ಅಡಿ ವಿಸ್ತೀರ್ಣದ ಜಾಗವನ್ನು ಅಭಿವೃದ್ಧಿಪಡಿಸಿ ಸುಂದರಿಕರಣಗೊಳಿಸಲಾಗಿತ್ತು. ಕಾಲಾನುಕ್ರಮದಲ್ಲಿಇಲ್ಲಿನ ಕಂಬಗಳಲ್ಲಿ ಬಿಡಿಸಲಾಗಿದ್ದ ವರ್ಣಚಿತ್ರದ ಬಣ್ಣಗಳು ಮಾಸಿಹೋಗಿತ್ತು. ಇದರ ನಿರ್ವಹಣೆಯಅವಶ್ಯಕತೆಇರುವುದನ್ನು ಮನಗಂಡರಾಮಕೃಷ್ಣ ಮಿಷನ್ ಸ್ವಯಂಸೇವಕರ ತAಡವು ಈ ವರ್ಣಚಿತ್ರಗಳನ್ನು ಮರುಪೈಂಟಿ0ಗ್ ಮಾಡುವಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ.

ಈ ಕಾರ್ಯಕ್ಕೆ ಮಂಗಳೂರು ರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿಅವರ ಉಪಸ್ಥಿಯಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಹೆಚ್.ವಿ. ಪ್ರಸಾದ್ ಚಾಲನೆ ನೀಡಿದರು. ಮುಂದಿನ ಒಂದು ತಿಂಗಳಿನಲ್ಲಿ ಆದಿತತ್ವಆರ್ಟ್ಸ್ನ ವಿಕ್ರಂ ಶೆಟ್ಟಿ ಹಾಗೂ ತಂಡ, ಮರುಪೈಂಟಿ0ಗ್‌ಕಾರ್ಯವನ್ನು ಪೂರ್ಣಗೊಳಿಸಲಿದೆ. ಈ ಕಾರ್ಯ ಪೂರ್ಣಗೊಂಡ ನಂತರ ನವೀಕೃತ ಪೈಂಟಿಗ್‌ಗಳ ಲೋಕಾರ್ಪಣೆಕಾರ್ಯಕ್ರಮ ನಡೆಯಲಿದೆ.