Wednesday, April 29, 2026

archivekahale news

ಸುದ್ದಿ

ಕರಾವಳಿಯಲ್ಲಿಲ್ಲ ನಿಫಾ ನಿರಾತಂಕವಾಗಿರಿ ವೈರಸ್, ವದಂತಿಗಳನ್ನು ನಂಬಬೇಡಿ – ಜಿಲ್ಲಾಧಿಕಾರಿ ಸೆಂಥಿಲ್

ಮಂಗಳೂರು : ಕರಾವಳಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ, ಜನರು ಭಯಪಡಬೇಕಾಗಿಲ್ಲ ಎಂದು ದ,ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಮೇ ೨೪ ರ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾಗಿದ್ದ ಕಾರಣ ಅನುಮಾನದ ಮೇರೆಗೆ ಹಾಗೂ ಇನ್ನೊಬ್ಬ ರೋಗಿಯ ಕಫದ ಮಾದರಿಯನ್ನು ತಪಾಸಣೆಗಾಗಿ ಕಳುಹಿಸಲಾಗಿತ್ತು. ಆದರೆ ಇದೀಗ ವರದಿ ದೊರಕಿದ್ದು, ಜಿಲ್ಲೆಯಲ್ಲಿ ಯಾರಿಗೂ ವೈರಸ್ ತಗುಲಿಲ್ಲ ಎಂದು...
ರಾಜಕೀಯ

Breaking News : ಶಾಸಕಾಂಗ ಪಕ್ಷದ ಸಭೆಗೆ ಡಿ.ಕೆ. ಶಿವಕುಮಾರ್ ಗೈರು ! – ಕಹಳೆ ನ್ಯೂಸ್

ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಗೈರು. ಕಾಂಗ್ರೆಸ್ ನ ನಡೆಯಿಂದ ತೀವ್ರವಾಗಿ ಮನನೊಂದಿದ್ದಾರೆ. ಇದೇ ಕಾರಣಕ್ಕಾಗಿಯೆರ ಗೈರಾಗಿದ್ದಾರೆಯೇ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಸಿದ್ಧರಾಮಯ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಮುಖ ಸಭೆಗೆ ಡಿಕೆಶಿ ಗೈರು....
ಸುದ್ದಿ

ಖ್ಯಾತ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರಿಗೆ ಭಾರತ ವಿಕಾಸರತ್ನ ಪ್ರಶಸ್ತಿ – ಕಹಳೆ ನ್ಯೂಸ್

ಮಂಗಳೂರು : ಭಾರತ ರತ್ನ ಸರ್. ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವರ ಸಹಕಾರದೊಂದಿಗೆ ದಿನಾಂಕ 25 ಶುಕ್ರವಾರದಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆಯುವ "ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 9ನೇ ಸಮ್ಮೇಳನ" ದಲ್ಲಿ ಕೊಡಮಾಡುವ "ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿಯನ್ನು " ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು...
ರಾಜಕೀಯ

Big News : ಜೆಡಿಎಸ್ ಶಾಸಕರಿಗೆ ಎರಡು ಪ್ರತ್ಯೇಕ ವಿಪ್ ಜಾರಿ – ಕಹಳೆ ನ್ಯೂಸ್

ಬೆಂಗಳೂರು, ಮೇ 25- ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ಜೆಡಿಎಸ್ ಎರಡು ಪ್ರತ್ಯೇಕ ವಿಪ್‍ಗಳನ್ನು ತನ್ನ ಶಾಸಕರಿಗೆ ನೀಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಯೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ನೀಡಿದ್ದಾರೆ. ವಿಧಾನಸಭಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿರುವ. ಕೆ.ಆರ್.ರಮೇಶ್‍ಕುಮಾರ್ ಪರವಾಗಿ ಮತ ನೀಡುವಂತೆ ವಿಪ್ ನೀಡಿದ್ದಾರೆ....
ಸುದ್ದಿ

ಮುಸ್ಲಿಂ ಗರ್ಭಿಣಿ ಮಹಿಳೆಗೆ ರಕ್ತ ನೀಡಿ ಜೀವ ಉಳಿಸಿದ ಹಿಂದು ಯುವಕ – ಕಹಳೆ ನ್ಯೂಸ್

ಮೂಡಬಿದಿರೆ: ಹಿಂದು ಯುವಕನೋರ್ವ ಗರ್ಭಿಣಿ ಮುಸ್ಲಿಂ ಮಹಿಳೆಯ ಜೀವ ಉಳಿಸಿದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ. ಯೋಗೇಶ್ ಕೊಡ್ಯಡ್ಕ ಮಾನವೀಯತೆ ಮೆರೆದ ಹಿಂದು ಯುವಕ ಎಂದು ಗುರುತಿಸಲಾಗಿದೆ.ನಗರದ ಜಿ.ಎ. ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಫಾತಿಮಾ ಅವರಿಗೆ ಹೆರಿಗೆ ಸಂದರ್ಭದಲ್ಲಿ ತುರ್ತಾಗಿ  ಒಂದು ಯೂನಿಟ್ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ಕುಟುಂಸ್ಥರಿಗೆ ತಿಳಿಸಿದ್ದರು. ಅಗತ್ಯವಿದ್ದ ರಕ್ತ ಸಂಗ್ರಹಿಸಲಾಗದೆ ಕಂಗಾಲಾಗಿದ್ದ ವೇಳೆ ಮೂಡಬಿದ್ರೆ ಬ್ಲಡ್ ಬ್ಯಾಂಕ್ ಈ ಬಗ್ಗೆ ರಕ್ತದಾನಿಗಳಿಗೆ ಮಾಹಿತಿ ನೀಡಿ ಮನವಿ ಮಾಡಿಕೊಂಡಿತ್ತು. ಆದರೆ...
ಸುದ್ದಿ

ಅಡ್ಯಾರ್ ಗಾರ್ಡನ್ ನಲ್ಲಿ ಮೇ 27ರಂದು ಯಕ್ಷಧ್ರುವ ಪಟ್ಲ ಸಂಭ್ರಮ – 2018 ; ಯಕ್ಷಗಾನ ಲೋಕದ ಅಪೂರ್ವ ಅತ್ಯುನ್ನತ ಸಂಯೋಜನೆ – ಕಹಳೆ ನ್ಯೂಸ್

ಮಂಗಳೂರು: ಯಕ್ಷಗಾನ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಸ್ಥಾಪಿಸಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ೩ನೇ ವರ್ಷದ ಪಟ್ಲ ಸಂಭ್ರಮ-೨೦೧೮ ಕಾರ್ಯಕ್ರಮವು ಮೇ ೨೭ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮೇ 27ರಂದು ಅಡ್ಯಾರ್ ಗಾರ್ಡನ್...
ಸುದ್ದಿ

ಮಾಹಿತಿ ಹಕ್ಕು ಕಾಯ್ದೆ ನಾಗರಿಕರ ಪರವಾಗಿದೆ ; ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ – ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್

ಪುತ್ತೂರು : ಪರಾತ್ಪರ ಗುರು ಡಾ ಜಯಂತ ಆಠವಲೆಯವರ 76 ನೇ ಜನ್ಮೋತ್ಸವದ ಪ್ರಯುಕ್ತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ‘ಮಾಹಿತಿ ಹಕ್ಕು ಕಾರ್ಯಾಗಾರ’ ಆಯೋಜಿಸಲಾಗಿತ್ತು. ಕಾರ್ಯಾಗಾರದ ಉದ್ಘಾಟನೆಯನ್ನು ದೀಪಪ್ರಜ್ವಲನದೊಂದಿಗೆ ಮಾಡಲಾಯಿತು. ದೀಪಪ್ರಜ್ವಲನೆಯನ್ನು ಮುಖ್ಯ ಅತಿಥಿ ಇವರು ಮಾಡಿದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಉಪಸ್ಥಿತರಿದ್ದರು. ಚಂದ್ರ ಮೊಗೇರ ಇವರು ಕಾರ್ಯಾಗಾರದ...
ರಾಜಕೀಯ

Big News : ಕುಮಾರ ಪಟ್ಟಾಭಿಷೇಕಕ್ಕೆ ಪಟ್ಟದರಸಿ ರಾಧಿಕಾ ಕುಮಾರಸ್ವಾಮಿ ಗೈರು! – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಇಂದು ಸಂಜೆ 4.30ಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ರಾಜ್ಯದ ಹಾಗೂ ರಾಷ್ಟ್ರದ ತೃತೀಯ ರಂಗದ ಎಲ್ಲಾ ನಾಯಕರು ಸೋನಿಯಾ, ರಾಹುಲ್ ಸೇರಿ ಅನೇಕ ಕಾಂಗ್ರೆಸ್ ಹಿರಿಯ ಮುಖಂಡರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು ,ಸಚಿವರು ಭಾಗಿಯಾಗಿದ್ದರು. ಕುಮಾರಸ್ವಾಮಿ ಕುಟುಂಬದ ಎಲ್ಲಾ ಸದಸ್ಯರು ಭಾಗಿಗಳಾಗಿದ್ದರು ಆದರೆ, ಕುಮಾರಸ್ವಾಮಿಯರ ಪ್ರೀತಿಯ ಪತ್ನಿ ರಾಧಿಕಾ ಮಾತ್ರ ಗೈರಾಗಿದ್ದರು. ಇದು ಕುಮಾರಸ್ವಾಮಿಯವರಿಗೂ ಬೇಸರತಂದಿದೆ ಎಂಬ...
1 1,423 1,424 1,425 1,426 1,427 1,459
Page 1425 of 1459