ಕಾಸರಗೋಡಿನ ತೀರವಾಸಿಗಳ ಬದುಕಿನ ಮೇಲೆ ಕಡಲ್ಕೊರೆತದ ಕರಿಛಾಯೆ ; ಕಡಲತೀರದ ನಿವಾಸಿಗಳ ಹೀನಾಯ ಸ್ಥಿತಿಯ ಕುರಿತು Exclusive ವರದಿ – ಕಹಳೆ ನ್ಯೂಸ್
ಕಾಸರಗೋಡು, ಜು 17 : ಮಳೆಯ ಅಬ್ಬರದ ನಡುವೆ ಕಡಲ್ಕೊರೆತ ವು ತೀರವಾಸಿಗಳ ಬದುಕನ್ನು ಕಸಿದುಕೊಂಡಿದೆ. ಉಪ್ಪಳ ಮುಸೋಡಿ , ಅದಿಕೆ ಮತ್ತು ಶಾರದಾ ನಗರ ತೀರವಾಸಿಗಳು ಭೀತಿಯ ನಡುವೆ ಬದುಕು ಸಾಗಿಸುತ್ತಿದ್ದಾರೆ .ಮುಸೋಡಿ , ಅದಿಕ ದಲ್ಲಿ ೨೫೦ ಮೀಟರ್ ನಷ್ಟು ಸ್ಥಳವನ್ನು ಸಮುದ್ರ ನುಂಗಿ ಹಾಕಿದೆ. ಹಲವಾರು ಮನೆಗಳು ಸಮುದ್ರಪಾಲಾಗಿವೆ. ತೀರವಾಸಿಗಳು ಮನೆ ಸೊತ್ತು ಬಿಟ್ಟು ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಒಂದೆಡೆ ಅಲೆಗಳ ಅಬ್ಬರ , ಇನ್ನೊಂದೆಡೆ...







