Recent Posts

Monday, June 8, 2026

ಸುಬ್ರಹ್ಮಣ್ಯ

ಸುದ್ದಿಸುಬ್ರಹ್ಮಣ್ಯ

ಪೊಲೀಸ್ ಠಾಣೆಗೆ ಟರ್ಪಾಲು ಹೊದಿಕೆ : ಇದು ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಸ್ಧಿತಿ– ಕಹಳೆ ನ್ಯೂಸ್

ಸುಬ್ರಮಣ್ಯ: ಜನರ ಆಗುಹೋಗುಗಳಿಗೆ ಪೊಲೀಸರು ಬೇಕು. ಜೋರು ಮಳೆ ಬಂದರೂ ಇವರು ಬೇಕು, ಜನರ ಬೇಕು ಬೇಡಗಳಲ್ಲಿ ಇವರು ಬೇಕು. ಆದರೆ ದೇಶದ ಪ್ರಾಮುಖ್ಯ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್‌ ಠಾಣೆಯ ಮಾಡಿಗೆ ಮಾತ್ರ ಟರ್ಪಾಲೇ ಬೇಕು. ಯಾಕೆಂದರೆ ಠಾಣೆಯ ಮಾಡಿನ ರಿಪೇರಿಗೆ ಹಣವಿಲ್ಲದೆ ನೀರು ಸೋರುವಿಕೆ ತಡೆಯಲು ಟರ್ಪಾಲು ಹೊದಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯ ಮಾಡು ಬಹಳವಾಗಿ ಶಿಥಿಲವಾಗಿ ಮಾಡು 3 - 4 ವರ್ಷ ಆಯ್ತು. ಒಳ...
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಬ್ರಹ್ಮಣ್ಯ

ಕಡಬ ಕಲ್ಲಾಜೆಯಲ್ಲಿ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ ; ಆರೋಪಿ ಶಕೀರ್ ಪೊಲೀಸ್ ವಶಕ್ಕೆ – ಕಹಳೆ ನ್ಯೂಸ್

ಕಡಬ, ಮಾ 29 : ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ಯುವತಿಯೋರ್ವಳಿಗೆ ಅನ್ಯ ಮತೀಯ ಯುವಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಕೀರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಕೀರ್ ಕಳೆದ ಎರಡು ದಿನಗಳಿಂದ ತರಗತಿ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದು ಅಡ್ಡ ನಿಂತು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಷಯವನ್ನು ಮನೆಯವರಿಗೂ ತಿಳಿಸಿದ್ದೇನೆ. ಮಾ.28ರಂದು ಕಲ್ಲಾಜೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ: ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಶಾಲಾ ಬಾಲಕಿ- ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಶಾಲಾ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುತ್ತಿಗಾರು ಎಂಬಲ್ಲಿ ನಡೆದಿದೆ. ಗುತ್ತಿಗಾರಿನ ನ್ಯಾಯವಾದಿ ಹರೀಶ್ ಪೂಜಾರಿಕೋಡಿ ಎಂಬವರ ಪುತ್ರಿ ನಿಹಾರಿಕಾ (13 ವರ್ಷ) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ನಿಹಾರಿಕಾ ಏಳನೇ ತರಗತಿಗೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಳು. ಕೊರೋನ ಕಾರಣದಿಂದಾಗಿ ಶಾಲೆ ಆರಂಭಗೊಳ್ಳದೆ, ಮನೆಯಲ್ಲಿಯೇ ನವೋದಯದ ಆನ್‍ಲೈನ್ ತರಗತಿ ನಡೆಯುತ್ತಿತ್ತು. ಇನ್ನು ಒಂದೆರಡು ದಿನಗಳಲ್ಲಿ ನವೋದಯ ಶಾಲೆ ಪುನರಾರಂಭಗೊಳ್ಳುವುದರಲ್ಲಿತ್ತು. ಇಂದು...
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರೊನಾ ಹಿನ್ನಲೆ ನಿಲ್ಲಿಸಲಾಗಿದ್ದ ಸೇವೆಗಳು ಪುನರರಾಂಭ- ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕೊರೊನಾ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಲ್ಲಿಸಲಾಗಿದ್ದ ಸೇವೆಗಳಿಗೆ ಇದೀಗ ಮತ್ತೆ ಅನುಮತಿಯನ್ನು ನೀಡಲಾಗಿದೆ. ಕೊರೊನಾ  ಹಿನ್ನಲೆ ಸರಕಾರದ ಆದೇಶದಂತೆ ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಕೊರೊನಾ ಪ್ರಕರಣಗಳ ತೀವ್ರತೆ ಇಳಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಮತ್ತು ಸೇವೆಗಳಿಗೆ ಅನುಮತಿ ನೀಡಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ 19ರ ನಿಯಮಗಳನ್ನು ಪಾಲಿಸಿಕೊಂಡು ಮೊದಲಿನಂತೆ ಭಕ್ತರು ಸೇವೆಗಳನ್ನು ನೆರವೇರಿಸಲು ಅವಕಾಶ ಮಾಡಲಾಗಿದೆ...
ಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ಮಾನ್ವಿತಾ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕೇತ್ರಕ್ಕೆ ಟಗರು ಸಿನಿಮಾ ನಾಯಕಿ ನಟಿ ಮಾನ್ವಿತಾ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ನಟಿ ಮಾನ್ವಿತ ‘ತುಂಬಾ ಜನರಿಗೆ ನಾನು ಮಂಗಳೂರಿನವಳು ಎಂಬುದು ಗೊತ್ತಿಲ್ಲ, ತುಳು ಭಾಷೆಯಲ್ಲಿ ಒಳ್ಳೆಯ ಚಿತ್ರ ಕಥೆ ಸಿಕ್ಕರೆ ನಟಿಸಲು ಸಿದ್ಧಳಿದ್ದೇನೆ' ಎಂದು ಹೇಳಿದರು. 'ಹೈದರಾಬಾದ್‌ನಲ್ಲಿ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದೇನೆ. ಒಳ್ಳೆಯ ಕನ್ನಡ ಚಿತ್ರಗಳ ನಿರ್ಮಿಸುವ ಗುರಿ ಇದೆ ಅದಕ್ಕಾಗಿ ದೇವರ ಆಶೀರ್ವಾದಕ್ಕಾಗಿ ಇಲ್ಲಿಗೆ...
ದಕ್ಷಿಣ ಕನ್ನಡಪುತ್ತೂರುಸುದ್ದಿಸುಬ್ರಹ್ಮಣ್ಯಸುಳ್ಯ

ಗ್ರಾಹಕಸ್ನೇಹಿ ಪಾರದರ್ಶಕ ವ್ಯವಹಾರದಲ್ಲಿ ಅತೀ ಹೆಚ್ಚು ಗ್ರಾಹಕ ಮೆಚ್ಚುಗೆ ಪಡೆದ ಹೊಂಡಾ ದ್ವಿಚಕ್ರ ವಾಹನ ಅಧಿಕೃತ ಮಾರಾಟ ಮಾಡುವ ಡೀಲರ್ ” ತಿರುಮಲ ಹೋಂಡಾ” ದಿಂದ ಭರ್ಜರಿ ಆಫರ್ – ಕಹಳೆ ನ್ಯೂಸ್

ಪುತ್ತೂರು : ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಕಂಪೆನಿಯ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗಾಗಿ ತಿರುಮಲ ಹೋಂಡಾ ವಿಶೇಷವಾದ ಆಫರ್‌ಗಳನ್ನ ನೀಡುತ್ತಿದೆ. ಹೋಂಡಾ ಆಕ್ಟೀವಾ 6ಜಿ ಖರೀದಿಸಬೇಕೆಂಬ ಗ್ರಾಹಕರ ಕನಸನ್ನು ನನಸು ಮಾಡೋದಿಕ್ಕಾಗಿ ತಿರುಮಲ ಹೋಂಡಾ ಶೋರೂಂ ಗ್ರಾಹಕರಿಗಾಗಿ ವಿಶೇಷ ವಿಭಿನ್ನವಾದ ಭರಪೂರ ಆಫರ್‌ಗಳನ್ನ ನೀಡುತ್ತಿದೆ. ಆನ್‌ರೋಡ್ 88,129/- ರುಪಾಯಿಗೆ ಆಕ್ಟೀವಾ 6ಜಿಯನ್ನ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಅಲ್ಲದೆ ಲೋನ್ ಮುಖಾಂತರ ಆಕ್ಟೀವಾ 6ಜಿ ಖರೀದಿಸುವವರಿಗೆ ಕೇವಲ 4444/- ರೂ...
ಸುಬ್ರಹ್ಮಣ್ಯ

ಚಲಿಸುತ್ತಿದ್ದ ಬೈಕ್‌ ಮೇಲೆ ಜಿಗಿದ ಕಡವೆ : ಬೈಕ್ ಸವಾರ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ರಸ್ತೆ ದಾಟುತ್ತಿದ್ದ ಕಡವೆಗೆ ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ನಡೆದಿದೆ. ಕುಮಾರಸ್ವಾಮಿ ಶಾಲೆಯ ಹೆಡ್ ಕ್ಲರ್ಕ್ ರಾಮಚಂದ್ರ ಅರ್ಬಿತಾಯ ಅವರು ರಾಜ್ಯಮಟ್ಟದ ಶಟಲ್ ಆಟಗಾರರಾಗಿದ್ದ, ಗಾಂಗೇಯ ಕ್ರಿಕೆಟ್ ತಂಡ ಸುಬ್ರಹ್ಮಣ್ಯದ ಆಟಗಾರರಾಗಿದ್ದ  ಅವರು ಪ್ರತಿನಿತ್ಯದಂತೆ ಕುಲ್ಕುಂದದ ಸೋಮಶೇಖರ್ ಅವರ ಮನೆಗೆ ಶಟಲ್ ಆಡಲು ಬೆಳಿಗ್ಗೆ 5:45ರ ಸಮಯ ತನ್ನ ತಮ್ಮನೊಂದಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ , ರಸ್ತೆ ದಾಟುತ್ತಿದ್ದ ಕಡವೆಗೆ ಢಿಕ್ಕಿಯಾಗಿ ಸ್ಥಳದಲ್ಲೇ...
ಸುಬ್ರಹ್ಮಣ್ಯ

ಜೆಸಿಐ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸಂಜೀವಿನಿ ಒಕ್ಕೂಟ ಸುಬ್ರಹ್ಮಣ್ಯ, ಆಟೋ ಚಾಲಕ ಮಾಲಕ ಸಂಘ ಸುಬ್ರಹ್ಮಣ್ಯ ಆರಕ್ಷಕ ಠಾಣೆಯ ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮ -ಕಹಳೆ ನ್ಯೂಸ್

ಸುಬ್ರಹ್ಮಣ್ಯ :ಜೆಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸಂಜೀವಿನಿ ಒಕ್ಕೂಟ ಸುಬ್ರಹ್ಮಣ್ಯ ,ಆಟೋ ಚಾಲಕ ಮಾಲಕ ಸಂಘ ಸುಬ್ರಹ್ಮಣ್ಯ ಹಾಗು ಸುಬ್ರಹ್ಮಣ್ಯ ಆರಕ್ಷಕ ಠಾಣೆಯ ಸಹಯೋಗದೊಂದಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಗಿಡನೆಡುವ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಸುಬ್ರಹ್ಮಣ್ಯ ಜೆಸಿಐ ರವಿಕಕ್ಕೆಪದವು ವಹಿಸಿದ್ದರು. ಗಿಡನೆಡುವುದರ ಮೂಲಕ ಪರಿಸರಕ್ಕೆ ದೊಡ್ಡ ಕೊಡುಗೆಯನ್ನು ನೀಡುವ ಮೂಲಕ ಉತ್ತಮ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ...
1 8 9 10 11 12 16
Page 10 of 16