Friday, March 6, 2026

ಪುತ್ತೂರು

ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪೆರ್ನಾಜೆಗೆ ಮತ್ತೆ ಪುನಃ ಪುನಃ ಬಂದ ಗಜರಾಜ – ಕಹಳೆ ನ್ಯೂಸ್

ಪೆರ್ನಾಜೆ: ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ಪೆ .17 ರಂದು ಮುಂಜಾನೆ 3.30 ಸಮಯ 10ಕ್ಕೂ ಮಿಕ್ಕಿ ಬಾಳೆ ಗಿಡ 3 ಅಡಿಕೆ ಗಿಡಗಳು ದ್ವಂಸ ಗುಡ್ಡಡ್ಕ ಆನೆಗುಂಡಿ ಕಡೆ ಬಂದಿರುವ ಆನೆ ರಸ್ತೆಯಲ್ಲಿ ಹಿಂತಿರುಗಿದೆ. ಎಲ್ಲೆ ಹೋದರೂ ಮತ್ತೆ ಪೆರ್ನಾಜೆಗೆ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ. ಯಾವ ಸೋಲಾರ್ ಬೇಲಿಯೂ ಅಳವಡಿಸಿದ್ದರು ನಿಷ್ಪ್ರಯೋಜಕವಾಗಿದೆ ಇದನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಇಲ್ಲವಾದಲ್ಲಿ ಮತ್ತೆ ಮತ್ತೆ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಆರ್ಯಾಪು: ಕೊಲ್ಯ ಕಾಲನಿಯಲ್ಲಿ ೨ ಕೋಟಿ ರೂ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ; ಚುನಾವಣೆಯ ವೇಳೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಅಶೋಕ್ ರೈ -ಕಹಳೆ ನ್ಯೂಸ್

ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯ ಕಾಲನಿಗೆ ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಇಲ್ಲಿನ ನಿವಾಸಿಗಳು ತಡೆಗೋಡೆಯ ಬೇಡಿಕೆಯನ್ನು ಮುಂದಿಟ್ಟಿದ್ದರು. ತಡೆಗೋಡೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿರಲಿಲ್ಲ, ಇಲ್ಲಿಗೆ ತಡೆಗೋಡೆ ಅಗತ್ಯವಿದೆ ಎಂದು ಹೇಳಿದ್ದೆ ಆದರೆ ಶಾಸಕನಾದ ಬಳಿಕ ಈ ಭಾಗದ ಜನರ ಬೇಡಿಕೆಯನ್ನು ಮರೆಯಲಿಲ್ಲ ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ೨ ಕೋಟಿ ಅನುದಾನ ಮಂಜೂರು ಮಾಡುವ ಮೂಲಕ ಜನರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಕೊಲ್ಯ ಕಾಲನಿಯಲ್ಲಿ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ಹಿಂದೆ ಇಲ್ಲಿ ಶಾಸಕರೋರ್ವರು ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಿ ವೋಟು ಪಡೆದು ಹೋಗಿದ್ದರು, ಜನರು ಇವರ ಮಾತನ್ನು ನಂಬಿ ಅವರಿಗೇ ವೋಟು ಹಾಕಿದ್ದರು ಆದರೆ ಕೇವಲ ತೆಂಗಿನ ಕಾಯಿ ಒಡೆದು ಹೋಗಿದ್ದು ಮಾತ್ರ ಇಲ್ಲಿಗೆ ಶಾಶ್ವತ ತಡೆಗೋಡೆ ಮಾಡಿದ್ದು ನಾವು ಕಾಂಗ್ರೆಸ್ ಸರಕಾರ ಎಂಬುದು ಜನ ಅರಿತುಕೊಂಡಿದ್ದಾರೆ. ಕಾಂಗ್ರೆಸ್ ಎಂದೂ ಬಡವರಿಗೆ ಅನ್ಯಾಯ ಮಾಡುವುದಿಲ್ಲ, ಕೊಟ್ಟ ಮಾತನ್ನು ಎಂದೂ ಉಳಿಸಿಕೊಳ್ಲುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ ಎಂದು ಶಾಸಕರು ಹೇಳಿದರು. ಅಪಾಯದಲ್ಲಿ ದಿನ ದೂಡುತ್ತಿದ್ದರು ಪ್ರತೀ ಮಳೆಗಾಲದಲ್ಲಿ ಇಲ್ಲಿನ ಮನೆಯವರು ಭಯದಲ್ಲೇ ದಿನ ದೂಡುತ್ತಿದ್ದರು. ಧರೆ ಯಾವಾಗ ಕುಸಿಯುತ್ತದೆ ಎಂಬ ಭಯ ಪ್ರತೀ ಮನೆಯವರಲ್ಲಿತ್ತು. ಸಣ್ಣ ಮನೆಯನ್ನು ಕಟ್ಟಿಕೊಂಡು , ಮಕ್ಕಳೊಂದಿಗೆ ವಾಸ ಮಾಡುತ್ತಿರುವ ಬಡ ಕುಟುಂಬಗಳಿಗೆ ಇಂದು ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದೇನೆ. ಬಡವರ ಪರ ಕೆಲಸ ಮಾಡುವವರು ಇಂದು ಕಡಿಮೆಯಾಗಿದ್ದಾರೆ. ಉಳ್ಳವರು ಎಲ್ಲವನ್ನೂ ಮಾಡಿಕೊಳ್ಳುತ್ತಾರೆ ಆದರೆ ಅರಿವಿನ ಕೊರತೆ ಇರುವ ಬಡವರು ಮನವಿ ಮಾಡುತ್ತಲೇ ಇದ್ದು ಅವರು ಕೊಡುವ ಭರವಸೆಯನ್ನು ನಂಬಿಕೊಂಡಿರುತ್ತಾರೆ. ಬಡವರಿಗೆ ವಂಚನೆ ಮಾಡುವ ಮನಸ್ಸು ಯಾರಿಗೂ ಇರಬಾರದು. ಇಂದು ಇಲ್ಲಿನ ಎಲ್ಲಾ ಮನೆಯವರಿಗೂ ಹಬ್ಬದ ವಾತಾವರಣ ಸೃಷ್ಟಿ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದೇನೆ ಎಂದು ಶಾಸಕರು ಹೇಳಿದರು. ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆಯಲಿದೆ ಮುಂದಿನ ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆಸುವಂತೆ ಸೂಚನೆಯನ್ನು ನೀಡಿದ್ದೇನೆ. ಕಳೆದ ೧೭ ವರ್ಷಗಳಿಂದ ಇಲ್ಲಿನ ಬಡ ಕುಟುಂಬಗಳು ನಿತ್ಯ ಕಣ್ಣೀರು ಹಾಕುತ್ತಿದ್ದರು ಇನ್ನು ಯಾರೂ ಆತಂಕದಿಂದ ಮಳೆಗಾಲ ಕಳೆಯುವುದು ಬೇಡ ಎಂದ ಶಾಸಕರು ಅಭಿವೃದ್ದಿ ಮಾಡಿದವರನ್ನು ಜನ ಮರೆಯಬಾರದು ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುವ ಮೂಲಕ ಇನ್ನಷ್ಟು ಬಡವರ ಸೇವೆ ಮಾಡಲು ಶಕ್ತಿ ತುಂಬ ಬೇಕು ಎಂದು ಮನವಿ ಮಾಡಿದರು. ಅಶೋಕ್ ರೈ ಶಾಸಕರಾಗಿದ್ದು ಬಡವರ ಭಾಗ್ಯ: ಕಾವು ಹೇಮನಾಥ ಶೆಟ್ಟಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಅಶೋಕ್ ರೈ ಶಾಕರಾಗಿದ್ದು ಬಡವರ ಪಾಲಿನ ಭಾಗ್ಯವಾಗಿದೆ. ಈ ಹಿಂದೆ ಎಷ್ಟೋ ಮಂದಿ ಇಲ್ಲಿ ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ, ಎಂಎಲ್ಸಿಗಳಾಗಿದ್ದಾರೆ ಯರೂ ಕೊಲ್ಯದ ಕಾಲನಿಯ ಜನರ ಕಣ್ಣೀರೊರೆಸುವ ಕೆಲಸ ಮಾಡಿಲ್ಲ. ಇಲ್ಲಿನ ಜನರ ಸಂಕಷ್ಟ ಅರಿತ ಶಾಸಕರು ೨ ಕೋಟಿ ಅನುದಾನ ಮಂಜೂರು ಮಾಡಿಸುವ ಮೂಲಕ ಬೇಡಿಕೆ ಈಡೇರಿಸಿದ್ದಾರೆ . ಅಶೋಕ್ ರೈ ಅವರಿಗೆ ನಾವೆಲ್ಲರೂ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡದ ಇವರ ಸಿದ್ದಾಂತಕ್ಕೆ ಬಿಜೆಪಿಯವರೂ ಸೋತಿದ್ದಾರೆ. ಶಾಶಕರೆದುರು ಪುತ್ತೂರು ಬಿಜೆಪಿ ಮಣ್ಣು ಪಾಲಾಗಲಿದೆ. ರಾಜಕೀಯ ರಹಿತ ಕೆಲಸ ಮಾಡುವ ಶಾಸಕರನ್ನು ಕಂಡ ಪುತತೂರು ಧನ್ಯವಾಗಿದೆ. ಕೊಲ್ಯದ ಜನರ ಪಾಲಿಗೆ ಶಾಸಕರು ಆಶಾಕಿರಣವಾಗಿದ್ದಾರೆ. ಶಾಸಕರ ಅಭಿವೃದ್ದಿ ಕೆಲಸವನ್ನು ಕಂಡು ಬೆಚ್ಚಿ ಬಿದ್ದ ಬಿಜೆಪಿ ಬಾಯಿಗೆ ಬಂದಂತೆ ಮಾತನಾಡತೊಡಗಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಪಕ್ಷಾತೀತವಾಗಿ ಅಶೋಕ್ ರೈಗೆ ಬೆಂಬಲ ನೀಡಲಿದೆ ಎಂದು ಹೇಳಿದರು. ಕಂದಾಯ ಇಲಾಖೆಯ ಅಮಾನವೀಯತೆ: ಆಲಿ ದ ಕ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದಾಲಿ ಮಾತನಾಡಿ ಈ ಹಿಂದೆ ನಿವೇಶನ ಕೇಳಿದ ಬಡ ಕುಟುಂಬಗಳಿಗೆ ಬೆಟ್ಟ, ಗುಡ್ಡದಲ್ಲಿ ಜಾಗ ನೀಡುವ ಮೂಲಕ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅಮಾನವೀಯತೆ ತೋರಿದ್ದರ ಪರಿಣಾಮ ಇಂದು ಕೊಲ್ಯದ ಬೆಟ್ಟದಲ್ಲಿ ಮನೆ ಮಾಡಬೇಕಾದ ಸ್ಥಿತಿ ಬಡವರಿಗೆ ಬಂದಿದೆ. ಸಾಕಷ್ಟು ಸರಕಾರಿ ಜಾಗವಿದ್ದರೂ ಅಲ್ಲಿ ಇವರಿಗೆ ನಿವೇಶನ ನೀಡಿರಲಿಲ್ಲ ಇದು ಅಮಾನವೀಯತೆಯಲ್ಲವೇ ಎಂದು ಪ್ರಶ್ನಿಸಿದ ಆಲಿಯವರು ಎಷ್ಟೋ ವರ್ಷಗಳ ಬಳಿಕ ಪುತ್ತೂರು ಶಾಸಕರು ಬಡವರಿಗೆ ನಿವೇಶನ ನೀಡಲು ೩೮೦ ಎಕ್ರೆ ಜಾಗ ಗುರುತಿಸಿದ್‌ದು ಆ ನಿವೇಶನವನ್ನು ಸುಸಜ್ಜಿತ ನಿವೇಶನವನ್ನಾಗಿ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ. ಶಾಸಕರಿಗಲ್ಲದೆ ಇಲ್ಲಿಗೆ ಎರಡು ಕೋಟಿ ಅನುದಾನ ತರಲು ಯಾರಿದಂಲೂ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿನ ಮಾಜಿ ಸಂಸದ ನಳಿನ್ ಇಲ್ಲಿಗೆ ಅನುದಾನ ನೀಡಿಲ್ಲ, ಸಂಜೀವ ಮಠಂದೂರು ನೀಡಿಲ್ಲ.ಚುನಾವಣೆಯ ಸಮಯದಲ್ಲಿ ಜನರ ಭಾವನೆಯನ್ನು ಕೆರಳಿಸಿ ಮತ ಪಡೆಯುವ ಇವರಿಗೆ ಜನರ ನೋವಿಗೆ ಸ್ಪಂದಿಸುವ ಆಸಕ್ತಿ ಇರಲಿಲ್ಲ ಎಂದು ಆಲಿ ದೂರಿದರು. ಮಠಂದೂರು ಶಾಸಕರಾಗಿದ್ದ ವೇಳೆ ಅನೇಕ ಮಂದಿ ಬಂಡವಾಳ ಶಾಹಿಗಳಿಗೆ, ಶ್ರೀಮಂತ ವ್ಯಕ್ತಿಗಳ ಮನೆಗೆ ಹೋಗುವ ರಸ್ತೆ ಬದಿ, ತೋಟದ ಬದಿಗೆ ತಡೆಗೋಡೆ ಮಾಡಿದ ಬಗ್ಗೆ ನನ್ನಲ್ಲಿ ದಾಖಲೆ ಇದೆ ಅವರಿಗೆ ಕೊಲ್ಯದ ಸಮಸ್ಯೆ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ. ಗ್ಯಾರಂಟಿ ಯೋಜನೆಯಿಂದ ಬಡವರ ಬದುಕು ಹಸನಾಗಿದೆ , ಕಾಂಗ್ರೆಸ್ ಯೋಜನೆಯನ್ನು ಜನ ಮರೆಯಬಾರದು, ಮುಂದಿನ ಗ್ರಾಪಂ, ತಾಪಂ , ಜಿಪಂ< ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಅಶೋಕ್ ರೈ ಅವರ ಕೈ ಬಲಪಡಿಸುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು. ಬಿಜೆಪಿಯವರಲ್ಲಿ ಹೇಳಿ ಸಾಕಾಗಿ ಹೋಗಿತ್ತು ಕೊನೆಗೆ ಬಿಜೆಪಿ ಬಿಟ್ಟು ಹೊರಬಂದೆ: ಪೂರ್ಣಿಮಾ ನಾನು ಈ ಹಿಂದೆ ಬಿಜೆಪಿಯಲ್ಲಿದ್ದೆ, ಕೊಲ್ಯ ಕಾಲನಿಗೆ ತಡೆಗೋಡೆ ಮಾಡಿ ಎಂದು ಬಿಜೆಪಿ ಶಾಸಕರಲ್ಲಿ ಮನವಿ ಮಾಡಿದ್ದೆ ಆದರೆ ಅವರು ಕ್ಯಾರೇ ಮಾಡಿರಲಿಲ್ಲ. ಹೇಳಿ ಹೇಳಿ ಸಾಕಾಗಿ ಹೋಗಿತ್ತು ಕೊನೆಗೆ ನಾನೇ ಬಿಜೆಪಿಯನ್ನು ಬಿಟ್ಟು ಹೊರಬಂದೆ ಎಂದು ಆರ್ಯಾಪು ಗ್ರಾಪಂ ಸದಸ್ಯೆ ಪೂರ್ಣಿ ಮಹೇಳಿದರು. ಬಿಜಪಿಯವರಿಂದ ಜನ್ಮದಲ್ಲಿ ಇಲ್ಲಿ ತಡೆಗೋಡೆ ಮಾಡ್ಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ ಅಶೋಕ್ ರೈ ಮಾಡಿ ಕೊಡುತ್ತಾರೆ ಎಂಬ ನಂಬಿಕೆ ಇತ್ತು ಆದೇ ರೀತಿ ಆಗಿದೆ ಎಂದ ಅವರು ನಾನು ಬಿಜೆಪಿ ಬಿಟ್ಟು ಹೊರ ಬಂದ ಕಾರಣ ಇಲ್ಲಿನ ಜನರಿಗೆ ಮುಖ ತೋರಿಸಲು ಸಾಧ್ಯವಾಗಿದೆ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿಗೆ ಕೊಳವೆ ಬಾವಿ ತೆಗೆಯುವಾಗಲೂ ಬಿಜೆಪಿಯವರು ಅಡ್ಡಗಾಲಿಟ್ಟಿದ್ದರು ಕೊನೆ ಗೆ ಶಾಸಕ ಅಶೋಕ್ ರೈಗಳು ಪೊಲೀಸ್ ಇಟ್ಟು ಬೋರ‍್ವೆಲ್ ತೆಗೆಸಿದ್ದಾರೆ ಅಂಥಹ ಮನಸ್ಸಿತಿಯವರು ಬಿಜೆಪಿಯವರು ಎಂದು ದೂರಿದರು. ಯೋಗೀಶ್ ಸಾಮಾನಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಲ್ಯ ನಿವಾಸಿಗಳ ಸಮಸ್ಯೆ ಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯ ಪವಿತ್ರಾ ರೈ, ಪಕ್ಷದ ಮುಖಂಡರಾದ ಸಲಾಂ ಸಂಪ್ಯ, ಹಾರಿಸ್ ಸಂಠ್ಯಾರ್, ಕೇಶವ ಸುವರ್ಣ, ಅಣ್ಣಿ ಕಲ್ಲರ್ಪೆ ಸ್ಥಳೀಯರಾದ ಪದ್ಮನಾಭ ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಸಂಟ್ಯಾರ್ ಸ್ವಾಗತಿಸಿ, ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಮಗಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಬಂಧ ಮಂಡನೆ-ಕಹಳೆ ನ್ಯೂಸ್

ಪುತ್ತೂರು: ಇತ್ತೀಚೆಗೆ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜು ಇಲ್ಲಿ ನಡೆದಿರುವ ಅಂತರಾಷ್ಟ್ರೀಯ ಮಟ್ಟದ ಮಾಧ್ಯಮ ಸಮ್ಮೆಳನದಲ್ಲಿ ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ನಿಭಾ ಡಿ (ತೃತೀಯ ಜೆಇ), ದೀಕ್ಷಾ ಯು.ಜೆ (ತೃತೀಯ ಜೆಇ), ರಿತೇಶ್ ಅಮ್ಮುಂಜ (ತೃತೀಯ ಜೆಪಿ) ಹಾಗೂ ತ್ರಿಷಾ ಜಿ.ಆರ್ (ತೃತೀಯ ಜೆಇ) ಇವರು ಪಾಪ್ಯುಲಿಸಂ ಮೀಡಿಯಾ: ಪವರ್, ಫ್ಲಾಟ್ ಫಾರಂ ವಾಯ್ಸಸ್ ಇನ್ ಎ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಫ್ಯಾಷನ್ ಲೋಕದಲ್ಲಿ ಹೊಸ ಸಂಚಲನ : ಫೆ.5ಕ್ಕೆ ‘ತಮನ್ವಿ ಸಿಲ್ಕ್ಸ್’ನ ಎರಡನೇ ಮಳಿಗೆ ಲೋಕಾರ್ಪಣೆ!-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಸ್ತ್ರ ಪ್ರಿಯರಿಗೆ ಸಿಹಿ ಸುದ್ದಿ! ಗುಣಮಟ್ಟ ಮತ್ತು ವಿನ್ಯಾಸಕ್ಕೆ ಹೆಸರಾಗಿರುವ ‘ತಮನ್ವಿ ಸಿಲ್ಕ್ಸ್’ ಇದೀಗ ತನ್ನ ಯಶಸ್ವಿ ಪಯಣವನ್ನು ವಿಸ್ತರಿಸುತ್ತಿದ್ದು, ಬಪ್ಪಳಿಗೆಯಲ್ಲಿ ತನ್ನ ನೂತನ ಮತ್ತು ಎರಡನೇ ಸುಸಜ್ಜಿತ ಶಾಖೆಯನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ತಮನ್ವಿ ಸಿಲ್ಕ್ಸ್: ಸೌಂದರ್ಯ ಮತ್ತು ಸಂಪ್ರದಾಯದ ಸಂಗಮ ಬೊಳುವಾರಿನ ಇನ್ ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿರುವ ಮೊದಲ ಶಾಖೆಯ ಅಭೂತಪೂರ್ವ ಯಶಸ್ಸಿನ ನಂತರ, ಈಗ ಬಪ್ಪಳಿಗೆಯಲ್ಲಿ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ‘ತಮನ್ವಿ ಸಿಲ್ಕ್ಸ್’ ಎಂದರೆ ಕೇವಲ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ವಿವೇಕಾನಂದ ಕಾಲೇಜಿನ ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ ‘ಕೊನೆಯವಳು’ ಎಂಬ ಕತೆ ಬಹುಮಾನಕ್ಕೆ ಆಯ್ಕೆ -ಕಹಳೆ ನ್ಯೂಸ್

ಪುತ್ತೂರು: ಮೈಸೂರು ಅಸೋಸಿಯೇಷನ್ ಮುಂಬಯಿಯ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ ನೇಸರು ಜಾಗತಿಕ ಕತೆ ಸ್ಪರ್ಧೆಯಲ್ಲಿ ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ 'ಕೊನೆಯವಳು' ಎಂಬ ಕತೆ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದೆ. ಮಾರ್ಚ್‌ನಲ್ಲಿ ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಭವ್ಯ ಪಿ.ಆರ್.ನಿಡ್ಪಳ್ಳಿ ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದ ಅನೇಕ ಲೇಖನ, ಕತೆ, ಕವನಗಳು ವಿವಿಧ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ : 4 ಆರೋಪಿಗಳನ್ನು ಬಂಧಿಸಿದ ಪೊಲೀಸರು -ಕಹಳೆ ನ್ಯೂಸ್

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿ, ಆರೋಪಿಗಳಾದ 1. ಮೊಹಮ್ಮದ್ ಹರ್ಷದ್ (33), ಪುತ್ತೂರು, 2. ಮಹಮ್ಮದ್ ಆರೀಶ್ (31), ಪುತ್ತೂರು, 3. ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46), ಪುತ್ತೂರು ಎಂಬವರುಗಳನ್ನು ಹಾಗೂ ಆರೋಪಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ನೀಡುತ್ತಿದ್ದ, 4. ಬಂಟ್ವಾಳ ನಿವಾಸಿ ಮುಸ್ತಾಫ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಬಂಟ್ವಾಳರಾಜಕೀಯರಾಜ್ಯಸುದ್ದಿ

ಇ–ಸ್ವತ್ತು 2.0 ತಾಂತ್ರಿಕ ವೈಫಲ್ಯ: ಗ್ರಾಮೀಣ ಜನರಿಗೆ ತೀವ್ರ ಸಂಕಷ್ಟ – ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು: ಶಾಸಕ ಕಿಶೋರ್ ಕುಮಾರ್ ಪುತ್ತೂರು -ಕಹಳೆ ನ್ಯೂಸ್

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದ ಶೂನ್ಯ ವೇಳೆಯಲ್ಲಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು, ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ “ಜಾರಿಯಾದ ತಿಂಗಳಲ್ಲೇ ಕೈಕೊಟ್ಟ ಇ–ಸ್ವತ್ತು 2.0” ಎಂಬ ವರದಿಯನ್ನು ಉಲ್ಲೇಖಿಸಿ, ರಾಜ್ಯದ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು. ಗ್ರಾಮೀಣ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುಲಭವಾಗಿ ಪಡೆಯಲು ಸರ್ಕಾರವು ಡಿಸೆಂಬರ್ 01 ರಿಂದ ಇ–ಸ್ವತ್ತು...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮದ್ಯಪಾನ ಮಾಡಿ ಅಪಘಾತ ಸಾವು ಸಂಭವಿಸಿದರೆ ‘ಶಿಕ್ಷಾರ್ಹ ನರಹತ್ಯೆ’ ಕಾನೂನಿನಡಿ ಶಿಕ್ಷೆ : ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ -ಕಹಳೆ ನ್ಯೂಸ್

ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಇನ್ನೊಬ್ಬರ ಪ್ರಾಣಕ್ಕೆ ತೊಂದರೆ ಮಾಡುವ ಪ್ರಕರಣಗಳಲ್ಲಿ ಇನ್ನು ಮುಂದೆ ಶಿಕ್ಷಾರ್ಹ ನರಹತ್ಯೆ (Culpable homicide) ಕಾಯ್ದೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ವಹಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ನಗರದ ಕುದ್ಮುಲ್‌ ರಂಗರಾವ್ ಪುರಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪೊಲೀಸ್‌ ನೇತೃತ್ವದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು....
1 2 3 350
Page 1 of 350