ಬೆಳ್ತಂಗಡಿಯ ಬಳಂಜದ ಯುವಕ ಮಂಗಳೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ- ಕಹಳೆ ನ್ಯೂಸ್
ಬಳಂಜ: ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಹೋಟೇಲ್ ಮ್ಯಾನೇಜ್ಮೆಂಟ್ ಕೋರ್ಸು ಮಾಡುತ್ತಿದ್ದ ಬಳಂಜದ ಯುವಕನೋರ್ವ ಜು. 28 ರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಳಂಜ ಗ್ರಾಮದ ಪಂಬಾಜೆ ಮನೆಯ ರಮಾನಾಥ ರೈ ಮತ್ತು ಲೀಲಾಂಜಲಿ ದಂಪತಿ ಪುತ್ರ ರಾಜಿತ್ (22ವ) ಮಂಗಳೂರಿನಲ್ಲಿ ತನ್ನ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಂಗಳೂರಿನ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ರಾಜಿತ್...







