ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣಪತ್ರ ಬಿಡುಗಡೆ, ಭಕ್ತಿ ಜೊತೆಗೆ ಸಂಸ್ಕಾರ ಅಗತ್ಯ: ಮಾಣಿಲಶ್ರೀ-ಕಹಳೆ ನ್ಯೂಸ್
ಬಂಟ್ವಾಳ: ವೇಣೂರು ಅಜಿಲ ಸೀಮೆ ಮಾಗಣೆಯ ಏಳು ಗ್ರಾಮದ ಭಕ್ತರು ಒಟ್ಟಾಗಿ ಭಕ್ತಿ ಮತ್ತು ಪ್ರೀತಿಯಿಂದ ಸಂಘಟಿತರಾಗಿ ಧಾರ್ಮಿಕತೆ ಜೊತೆಗೆ ಸಮಸ್ತ ಭಕ್ತರಿಗೆ ಸಂಸ್ಕಾರ ನೀಡಲು ಶ್ರಮಿಸಬೇಕು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಾನುವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಮಂತ್ರಣಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಸಂಕುಚಿತ ಮನೋಭಾವ ತೊರೆದು ಆದಾಯ ಸದುಪಯೋಗಪಡಿಸಬೇಕು ಎಂದರು. ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ್...







