Tuesday, April 28, 2026

ಪ್ರಾದೇಶಿಕ

ಮೂಡಬಿದಿರೆ

ಸಚಿವ ದಿವಂಗತ ಕೆ. ಅಮರನಾಥ ಶೆಟ್ಟಿಯವರ ಸಂಸ್ಮರಣಾ ದಿನಾಚರಣಾ ಕಾರ್ಯಕ್ರಮದಲ್ಲಿ ಶಾಸಕ ಉಮನಾಥ್ ಕೋಟ್ಯಾನ್ ಭಾಗಿ-ಕಹಳೆ ನ್ಯೂಸ್

ಮೂಡುಬಿದಿರೆ: ಮಾಜಿ ಶಾಸಕರೂ ಹಾಗೂ ಸಚಿವರಾಗಿದ್ದಂತಹ ದಿವಂಗತ ಕೆ. ಅಮರನಾಥ ಶೆಟ್ಟಿಯವರ ಸಂಸ್ಮರಣಾ ದಿನಾಚರಣೆಯ ಕರ‍್ಯಕ್ರಮದ ಮೂಡುಬಿದಿರೆ ಕೋ- ಆಪರೇಟಿವ್ ರ‍್ವೀಸ್ ಬ್ಯಾಂಕ್ ಲಿ. ಮೂಡುಬಿದಿರೆ ನಡೆಯಿತು. ಈ ಸಂರ‍್ಭದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಚಾರುಕರ‍್ತಿ ಪಂಡಿತಾಚರ‍್ಯರ‍್ಯ ಮಹಾಸ್ವಾಮಿಜಿಯವರು ಆಶರ‍್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಉಮನಾಥ್ ಕೋಟ್ಯಾನ್ ಅವರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಎಂ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಮಾಜಿ ಶಾಸಕರಾದ ಕೆ. ಅಭಯಚಂದ್ರ...
ಬಂಟ್ವಾಳ

ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕøತಿಕ ಸಂಘದ ಉದ್ಘಾಟನೆ-ಕಹಳೆ ನ್ಯೂಸ್

ಬಂಟ್ವಾಳ : ಜನವರಿ 26 ಶ್ರೀರಾಮ ಪದವಿ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ಖ್ಯಾತ ಯಕ್ಷಗಾನ ಹಾಸ್ಯಕಲಾವಿದ ದಿನೇಶ್ ಕೊಡಪದವು ಇವರು ಉದ್ಘಾಟಿಸಿದರು. ನಿಜವಾದ ಸಂಸ್ಕೃತಿ, ಸಾಂಸ್ಕೃತಿಕ ವೈಭವವನ್ನು ನೋಡಲು ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರಬೇಕು ಎಂದವರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ನಾಗೇಶ್ ಇರಾ, ಶ್ರೀಮತಿ ಲಕ್ಷ್ಮಿ ರಘುರಾಜ್ ಹಾಗೂ ಪ್ರಾಚಾರ್ಯರಾದ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ಇವರು ಉಪಸ್ಥಿತರಿದ್ದರು. ಇದಾದ ಬಳಿಕ...
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಪಾರಂಪರಿಕ ಮಾದರಿ ಸ್ಪರ್ಧೆ ಪಾರಂಪರಿಕ ವಸ್ತುಗಳ ಜ್ಞಾನ ಮಕ್ಕಳಲ್ಲಿ ಬೆಳೆಯಬೇಕು; ರಮೇಶ್ ಕೆ.-ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿಗಳಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಉತ್ತಮ ಅವಕಾಶ ಮತ್ತು ಪ್ರೊತ್ಸಾಹ ನೀಡುವುದು ನಮ್ಮ ಕರ್ತವ್ಯ. ಹಾಗೇ ನಮ್ಮ ದೇಶ ಪಾರಂಪರಿಕವಾಗಿ ಮುನ್ನಡೆದಿರುವುದು ನಮ್ಮ ಹೆಮ್ಮೆ.ದೇಶದ ಸಾಂಸ್ಕøತಿಕ ಸೊಬಗಿಗೆ ಪ್ರವಾಸಿಗರೂ ನಮ್ಮ ದೇಶಕ್ಕೆ ಬರುವುದು ಹೆಚ್ಚಾಗಿದೆ. ಹಾಗಾಗಿ ಪಾರಂಪರಿಕ ವಸ್ತುಗಳ ಜ್ಞಾನ ಮಕ್ಕಳಲ್ಲಿ ಬೆಳೆಯಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಕೆ. ಹೇಳಿದರು. ಅವರು ಕಾಲೇಜಿನ ಐಕ್ಯೂಎಸಿ, ಇತಿಹಾಸ ವಿಭಾಗ, ಹೆರಿಟೇಜ್ ಕ್ಲಬ್, ರಾಜ್ಯಶಾಸ್ತ್ರ...
ಮೂಡಬಿದಿರೆ

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ-ಕಹಳೆ ನ್ಯೂಸ್

ಮೂಡುಬಿದಿರೆ : ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜು ಮತ್ತು ಆಂಗ್ಲಮಾಧ್ಯಮ ಶಾಲೆಯಲ್ಲಿ ಎಪ್ಪತ್ತೆರಡನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣಗೈದ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮಾತನಾಡಿ ನಮ್ಮ ದೇಶಕ್ಕೆ ಭಾವೈಕ್ಯತೆಯು ಜೀವವಾಗಿದೆ. ಸಮೃಧ್ಧ ಸಂಸೃತಿಯ ಇತಿಹಾಸ ಮತ್ತು ವೀರ ಧೀರರ ಪರಂಪರೆಯ ಹಿನ್ನಲೆಯಿದೆ. ನಾವೆಲ್ಲರು ನಮ್ಮ ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವ ಮೂಲಕ ಸಾಂಘಿಕವಾಗಿ ಪ್ರಯತ್ನ ಪಟ್ಟರೆ ದೇಶದ ವಿವಿಧ ಕ್ಷೇತ್ರಗಳ ಪ್ರಗತಿ...
ಪುತ್ತೂರು

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ, ಸಂಸ್ಥೆಯ ತತ್ವಗಳು ಮತ್ತು ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಬೆಂಗಳೂರಿನ ಜನರಲ್ ಕರ್ನಾಟಕ ಸರ್ಕಾರದ ಹೆಚ್ಚುವರಿ ವಕೀಲರಾದ ಶ್ರೀ ಅರುಣ ಶ್ಯಾಮ್ ಹೇಳಿದರು, ವಿವೇಕಾನಂದ ಕಾನೂನು ಕಾಲೇಜು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂ ಡೆಲ್ಲಿ ಮತ್ತು...
ಪುತ್ತೂರು

ದೇಶಕ್ಕಾಗಿ ನಾವು ಬದುಕುವುದನ್ನು ಕಲಿಯಬೇಕು; ಅಚ್ಯುತ್ ನಾಯಕ್-ಕಹಳೆ ನ್ಯೂಸ್

ಪುತ್ತೂರು : ಇಂಗ್ಲೀಷರು, ಡಚ್ಚರು, ಫ್ರೆಂಚರು, ಹೂಣರು ಹೀಗೆ ಅನೇಕ ಪರದೇಶೀಯರು ನಮ್ಮ ದೇಶದ ಮೇಲೆ ದಾಳಿ ಮಾಡಿದ್ದರು. ನಿರಂತರವಾಗಿ ಹೋರಾಟ ನಡೆಯಿತು. ನಾವು ಭಾರತೀಯರು ನಮ್ಮ ದೇಶಕ್ಕೆ ಆಕ್ರಮಣ ಮಾಡಿದ, ಕೇಡು ಬಯಸಿದವರನ್ನು ಒಂದು ದಿನಕ್ಕೂ ನೆಮ್ಮದಿಯಿಂದಿರಲು ಬಿಟ್ಟಿಲ್ಲ. ಅಂತಿಮವಾಗಿ 1947ರಲ್ಲಿ ಭಾರತ ಸ್ವತಂತ್ರ ದೇಶವಾಯಿತು. 1950ರಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯವಾಯಿತು. ನಮಗೆ ಸಿಕ್ಕ ಈ ಸ್ವಾತಂತ್ರ್ಯ ಸಾವಿರಾರು ದೇಶಪ್ರೇಮಿಗಳ ಬಲಿದಾನದ ಫಲ. ಅದನ್ನ ಉಳಿಸುವುದು ಬೆಳೆಸುವುದು ನಮ್ಮೆಲ್ಲರ...
ಪುತ್ತೂರು

ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸಿದ ಪುತ್ತೂರಿನ ಕುವರಿ- ಕಹಳೆ ನ್ಯೂಸ್

ನೆಲ್ಯಾಡಿ: ಇಂದು ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ, ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ಆಗಿರುವ ಮತ್ತು ಗ್ರಾಮೀಣ ಪ್ರದೇಶವಾದ ಕಡಬ ತಾಲೂಕಿನ ನೆಲ್ಯಾಡಿಯ ನಿವಾಸಿ ಉದ್ಯಮಿ ರಮೇಶ್ ಹಾಗೂ ಕಾಂಗ್ರೆಸ್ ನಾಯಕಿ , ಪುತ್ತೂರು ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್ ರವರ ಪುತ್ರಿ, ಕುಮಾರಿ ರಕ್ಷಾ ಅಂಚನ್ ಪರೇಡ್‍ನಲ್ಲಿ ಭಾಗವಹಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಫಿಲೋಮಿನಾ...
ಪುತ್ತೂರು

ಬಪ್ಪಳಿಗೆಯ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ, ಸಂವಿಧಾನ ನಮ್ಮ ರಾಷ್ಟ್ರದ ತಳಪಾಯ : ಮಹೇಶ್ ಕಜೆ- ಕಹಳೆ ನ್ಯೂಸ್

ಪುತ್ತೂರು: ಸಂವಿಧಾನ ನಮ್ಮ ರಾಷ್ಟ್ರದ ತಳಪಾಯ. ಇದರ ಆಧಾರದಲ್ಲಿ ದೇಶದ ವ್ಯವಸ್ಥೆ ಬೆಳೆದುಬಂದಿದೆ. ಈ ಉತ್ಕøಷ್ಟ ಸಂವಿಧಾನವನ್ನು ಕಾಪಾಡಿಕೊಳ್ಳುವ ಹೊಣೆ ಭಾರತೀಯರೆಲ್ಲರ ಮೇಲಿದೆ. ದೇಶಸೇವೆಗೆ ಅವಕಾಶ ದೊರೆಯುವುದು ನಮ್ಮ ಪೂರ್ವಜನ್ಮದ ಸುಕೃತ ಎಂದುಕೊಳ್ಳಬೇಕು. ಈ ದೇಶಕ್ಕಾಗಿ ಕೃತಿಯ ಮೂಲಕ ತಾನೇನು ಮಾಡಬಹುದು ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕು ಎಂದು ಅಂಬಿಕಾ ಬಾಲವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ ಹೇಳಿದರು.       ಅವರು ಇಲ್ಲಿನ ನಟ್ಟೋಜ...
1 812 813 814 815 816 872
Page 814 of 872