Saturday, April 25, 2026

ಕುಂದಾಪುರ

ಕುಂದಾಪುರಸುದ್ದಿ

ಕುಂದಾಪುರ :ಕೊಯಿಮುತ್ತುರ್ ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ನಲ್ಲಿ 2 ಚಿನ್ನ , 2 ಬೆಳ್ಳಿ ಗೆದ್ದ ಸತೀಶ್ ಖಾರ್ವಿ- ಕಹಳೆ ನ್ಯೂಸ್

ಕುಂದಾಪುರ : ಇತ್ತೀಚೆಗೆ ಕೊಯಿಮುತ್ತುರ್ ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್‍ನಲ್ಲಿ ಕುಂದಾಪುರ ಹಕ್ರ್ಯುಲೆಸ್ ಜಿಮ್ ನ ವ್ಯವಸ್ಥಾಪಕ ರಾಗಿರುವ ಸತೀಶ್ ಖಾರ್ವಿ ಮಾಸ್ಟರ್ 1 ವಿಭಾಗ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಹಾಗೂ 2 ಬೆಳ್ಳಿ ಪದಕ ಹಾಗೂ ಏಷ್ಯಾ ಬಲಿಷ್ಠ 1st ರನ್ನರ್ ಅಪ್ ಪ್ರಶಸ್ತಿ- 2022 ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಇರಾನಿನ ಅಮೀರ್ ಹಾಗೂ ಕಂಚಿನ ಪದಕ ಭಾರತದ ಕುಮಾರ್ ಉಪೇಂದ್ರ...
ಕುಂದಾಪುರಸುದ್ದಿ

ಕರಾವಳಿ ರಾಜಕೀಯ ಕ್ಷೇತ್ರದ ಭೀಷ್ಮ ಎ.ಜಿ. ಕೊಡ್ಗಿ ನಿಧನ – ಕಹಳೆ ನ್ಯೂಸ್

ಕುಂದಾಪುರ: ರಾಜಕೀಯ ಕ್ಷೇತ್ರದಲ್ಲಿ ಕರಾವಳಿ ರಾಜಕೀಯ ಭೀಷ್ಮ ಎಂದೇ ಕರೆಸಿಕೊಳ್ಳುತ್ತಿದ್ದ ಚಾಣಾಕ್ಷ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ.ಜಿ. ಕೊಡ್ಗಿ) ಅವರು ಅಸೌಖ್ಯದಿಂದ ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೃಷಿ ಕುಟುಂಬದಲ್ಲಿ 1929ರ ಅ.1ರಂದು ಜನಿಸಿದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರ ತಂದೆ ಕೃಷ್ಣರಾಯ ಕೊಡ್ಗಿ ಸ್ವಾತಂತ್ರ್ಯ ಹೋರಾಟಗಾರರು. ಕಾನೂನು ಪದವಿ ಪಡೆದ ಕೊಡ್ಗಿಯವರು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್ ಅವರೊಂದಿಗೆ ಸ್ವಲ್ಪ ಸಮಯ ವಕೀಲರಾಗಿ ಕೆಲಸ...
ಕುಂದಾಪುರಸುದ್ದಿ

ಉಡುಪಿ ಜಿಲ್ಲೆ ಸೇರಿದಂತೆ ಅಂತರ್ ಜಿಲ್ಲೆಗಳ ಹನ್ನೆರಡು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೈಕ್ ಕಳ್ಳರಿಬ್ಬರನ್ನು ಬಂಧಿಸಿದ ಕೋಟ ಪೊಲೀಸರು –ಕಹಳೆ ನ್ಯೂಸ್

ಕುಂದಾಪುರ: ಉಡುಪಿ ಜಿಲ್ಲೆ ಸೇರಿದಂತೆ ಅಂತರ್ ಜಿಲ್ಲೆಗಳ ಹನ್ನೆರಡು ಬೈಕ್‌ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೈಕ್‌ ಕಳ್ಳರಿಬ್ಬರನ್ನು ಕೋಟ‌ಠಾಣೆ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಒಂಬತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿನ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಹಾಗೂ ಪತ್ತೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ಅಧೀಕ್ಷಕರ ನಿರ್ದೇಶನದಂತೆ ವಿಶೇಷ ತಂಡವು ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿದ್ದ ಸಂದರ್ಭ...
ಕುಂದಾಪುರಸುದ್ದಿ

ಕುಂದಾಪುರ: ಸರಕಾರಿ ಬಸ್‍ಗಾಗಿ ಆಗ್ರಹಿಸಿ ಕುಂದಾಪುರ ಎಬಿವಿಪಿ ವತಿಯಿಂದ ಶನಿವಾರ ನಗರದ ಶಾಸ್ತ್ರಿ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ – ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರದಿಂದ ಕೆರಾಡಿ, ಮಾರಣಕಟ್ಟೆ, ಬೆಳ್ಳಾಲ, ಕೊಲ್ಲೂರು ಮಾರ್ಗಕ್ಕೆ ಸರಕಾರಿ ಬಸ್ ಅನ್ನು ಓಡಿಸುವಂತೆ ಆಗ್ರಹಿಸಿ ಎಬಿವಿಪಿ ಕುಂದಾಪುರ ವತಿಯಿಂದ ಶನಿವಾರ ನಗರದ ಶಾಸ್ತ್ರಿ ವೃತ್ತದಿಂದ ತಾಲೂಕು ಕಚೇರಿಯವರೆಗೆ ಮಳೆಯಲ್ಲಿಯೆ ನೆನೆದುಕೊಂಡು ಪ್ರತಿಭಟನಾ ಮೆರವಣಿಗೆ ನಡೆಯಿತು. ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಎಬಿವಿಪಿ ವಿದ್ಯಾರ್ಥಿಗಳಿಂದ ಮನವಿಯನ್ನು ಸ್ವೀಕರಿಸಿದರು. ಕುಂದಾಪುರದಿಂದ ಕೆರಾಡಿ, ಮಾರಣಕಟ್ಟೆ ಮಾರ್ಗದಲ್ಲಿ500 ಮತ್ತು ಕುಂದಾಪುರ ಬೆಳ್ಳಾಲ ಮಾರ್ಗದಲ್ಲಿ 400 ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಈ ಮಾರ್ಗದಲ್ಲಿ...
ಕುಂದಾಪುರಸುದ್ದಿ

ಮುಸ್ಲಿಂ ಮಹಿಳೆಯರನ್ನು ಬಳಸಿಕೊಂಡು ಅಕ್ರಮ ಗೋಮಾಂಸ ಸಾಗಾಟ : ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು – ಕಹಳೆ ನ್ಯೂಸ್

ಕುಂದಾಪುರ: ಯಾರಿಗೂ ಅನುಮಾನ ಬಾರದಂತೆ ಮುಸ್ಲಿಂ ಮಹಿಳೆಯರನ್ನು ಕಾರಿನ ಮುಂಭಾಗದಲ್ಲಿ ಕೂರಿಸಿಕೊಂಡು ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಂದಾಪುರದಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೈಂದೂರು ಹಿಂದೂ ಸಂಘಟನೆಯ ಕಾರ್ಯಕರ್ತರು ಬೈಂದೂರಿನಲ್ಲಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬೈಂದೂರು ಠಾಣೆಯಲ್ಲಿ...
ಕುಂದಾಪುರಸುದ್ದಿ

ಲವ್ ಜಿಹಾದ್ : ಶಿಲ್ಪಾಳ ಸಾವು ಆತ್ಮಹತ್ಯೆ ಅಲ್ಲ. ಇದೊಂದು ವ್ಯವಸ್ಥಿತವಾದ ಕೊಲೆ : ಶಿಲ್ಪಾ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಕುಂದಾಪುರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಜನಜಾಗೃತಿ ಸಭೆ –ಕಹಳೆ ನ್ಯೂಸ್

ಉಡುಪಿ: ಶಿಲ್ಪಾಳ ಸಾವು ಆತ್ಮಹತ್ಯೆ ಅಲ್ಲ. ಇದೊಂದು ವ್ಯವಸ್ಥಿತವಾದ ಕೊಲೆ. ಇಂದು ಶಿಲ್ಪಾ ದೇವಾಡಿಗ ಎಂದು ಸುಮ್ಮನಾದರೇ ನಾಳೆ ಲವ್ ಜಿಹಾದ್ ನಮ್ಮ ಮನೆಯ ಅಂಗಳಕ್ಕೆ ಬರುತ್ತದೆ. ಈ ರೀತಿಯ ದೌರ್ಜನ್ಯ ನಡೆಯಬಾರದು ಎಂದಾದರೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಲೇಬೇಕು. ಖಂಡಿತವಾಗಿಯೂ ಈ ಮೌನ ಕುಂದಾಪುರಕ್ಕೆ ಒಳ್ಳೇಯದಲ್ಲ. ಇಂತಹ ಗಂಭೀರ ಪ್ರಕರಣದ ವಿರುದ್ದ ಕುಂದಾಪುರದ ಹಿಂದೂ ಸಮಾಜ ಸೆಟೆದು ನಿಂತು ರಸ್ತೆಗಿಳಿದು ಪ್ರತಿಭಟಿಸಬೇಕಿತ್ತು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ...
ಕುಂದಾಪುರಸುದ್ದಿ

ಲವ್ ಜಿಹಾದ್‍ಗೆ ಬಲಿಯಾದ ಕುಂದಾಪುರದ ಯುವತಿ ಮನೆಗೆ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಭೇಟಿ- ಕಹಳೆ ನ್ಯೂಸ್

ಕುಂದಾಪುರ : ಲವ್ ಜಿಹಾದ್‍ಗೆ ಬಲಿಯಾದ ಕುಂದಾಪುರದ ಯುವತಿಯ ಮನೆಗೆ ಅಖಿಲ ಭಾರತೀಯ ಸಂತ ಸಮಿತಿ ಪ್ರದೇಶ ಪ್ರಮುಖ್, ಓಂ ಶ್ರೀ ಮಠ ಮಂಗಳೂರಿನ ಸ್ವಾಮಿ, ಓಂ ಶ್ರೀ ವಿದ್ಯಾನಂದ ಸರಸ್ವತಿಯವರು ಭೇಟಿ ನೀಡಿದ್ದಾರೆ. ಯುವತಿಯ ಕುಟುಂಬಕ್ಕೆ ಸಾಂತ್ವಾನ ಹೇಳಿದ ಶ್ರೀಗಳು ‘ವಿಶ್ವ ಹಿಂದೂ ಪರಿಷತ್ , ಬಜರಂಗದಳ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಜಾಗರೂಕವಾಗಿದ್ದುಕೊಂಡು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ಏನೇ ಒತ್ತಡ ಬಂದರೂ ಕೂಡಾ ನಮ್ಮ ಮಠದ ಗಮನಕ್ಕೆ ತನ್ನಿ,...
ಕುಂದಾಪುರಸುದ್ದಿ

ಭಾರೀ ಸಂಚಲನ ಮೂಡಿಸಿದ್ದ ಉಪ್ಪಿನಕುದ್ರು ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು – ಕಹಳೆ ನ್ಯೂಸ್

ಕುಂದಾಪುರ: ಭಾರೀ ಸಂಚಲನ ಮೂಡಿಸಿದ್ದ ಉಪ್ಪಿನಕುದ್ರು ಶಿಲ್ಪಾ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಝೀಝ್ (32) ಹಾಗೂ ಆತನಿಗೆ ಸಹಕರಿಸಿದ ರಹೀಮ್ (34) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಡಿವೈಎಸ್ಪಿ ಶ್ರೀಕಾಂತ ಕೆ, ಸರ್ಕಲ್ ಇನ್ಸಪೆಕ್ಟರ್ ಗೋಪಿಕೃಷ್ಣ, ಉಪ ನಿರೀಕ್ಷಕರಾದ ಶ್ರೀಧರ ನಾಯಕ್, ಸದಾಶಿವ ಗವರೋಜಿ ನೇತೃತ್ವದ ಪೊಲೀಸರ ತಂಡ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದು, ಇಬ್ಬರನ್ನು ಸೋಮವಾರ ಹೆಮ್ಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಕುಂದಾಪುರ...
1 15 16 17 18 19 20
Page 17 of 20