ಪುತ್ತಿಗೆ ಪರ್ಯಾಯೋತ್ಸವ ; ಭರದಿಂದ ಸಾಗುತ್ತಿದೆ ಸ್ವಾಗತ ಕಮಾನುಗಳ ನಿರ್ಮಾಣ – ಕಹಳೆ ನ್ಯೂಸ್
ಉಡುಪಿ: ಐದು ಶತಮಾನಗಳ ಹಿಂದೆ ಶ್ರೀ ವಾದಿರಾಜರು ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ವ್ಯವಸ್ಥೆಯಲ್ಲಿ ಪರಿವರ್ತನೆ ಮಾಡಿ, ಎರಡು ತಿಂಗಳ ಪರ್ಯಾಯ ಎರಡು ವರ್ಷಗಳಿಗೆ ವಿಸ್ತರಿಸಿದರು. ಈಗ ಎರಡು ವರ್ಷದಂತೆ 252ನೇ ಪರ್ಯಾಯ ಮಹೋತ್ಸವಕ್ಕೆ ಪುತ್ತಿಗೆ ಮಠ ಅಣಿಯಾಗು ತ್ತಿದೆ. ಪರ್ಯಾಯೋತ್ಸ ದಲ್ಲಿ ಮೊದಲ ಪ್ರಮುಖ ಆಕರ್ಷಣೆ ನಗರದ ಅಲಂಕಾರ. ಇದಕ್ಕೆ ಇನ್ನಷ್ಟು ಮೆರುಗು ನೀಡುವುದು ಸ್ವಾಗತ ಕಮಾನುಗಳು. ಇದರ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದೆ. ನಗರದಲ್ಲಿ ಒಟ್ಟು 22 ಸ್ವಾಗತ...







