ಉಡುಪಿಯ ಕಲಾಲೋಕದ ಆಡುಂಬೊಲವಾಗಿರುವ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜು. 25 ಮತ್ತು 26ರಂದು “ಸಂಸ್ಕೃತಿ ಸಂಭ್ರಮ”ದ ಸಡಗರ-ಕಹಳೆ ನ್ಯೂಸ್
ಉಡುಪಿ : ಕರಾವಳಿಯ ಉಡುಪಿ ನಗರದೊಳಗೆ ಅಷಾಢದ ಮಳೆಯ ನಡುವೆ ಸಂಸ್ಕೃತಿ ಸಂಭ್ರಮದ ರಂಗೇರುತ್ತಿದೆ. ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡಮಿ, ಕರ್ನಾಟಕ ಜಾನಪದ ಅಕಾಡಮಿ ಮತ್ತು ಕರ್ನಾಟಕ ನಾಟಕ ಅಕಾಡಮಿ ಹಾಗೂ ರಂಗಭೂಮಿ (ರಿ.) ಉಡುಪಿ, ಇವರೆಲ್ಲರ ಸಹಯೋಗದಲ್ಲಿ ಗೊಂಬೆಯಾಟ, ಜಾನಪದ ಕಲೆ, ಸಂಗೀತ, ನಾಟಕಗಳು ಮೇಲೈಸಿದ ಸಮರಸದ ರಸಪಾಕ ಸಿದ್ಧವಾಗುತ್ತಿದೆ. ಉಡುಪಿಯ ಕಲಾಲೋಕದ ಆಡುಂಬೊಲವಾಗಿರುವ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ...







