Thursday, May 14, 2026

ಜಿಲ್ಲೆ

ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ತಾಲೂಕುಮಟ್ಟದ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ -ಕಹಳೆ ನ್ಯೂಸ್

ಪುತ್ತೂರು : ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟವು ಸರಕಾರಿ ಪದವಿಪೂರ್ವ ಕಾಲೇಜು, ಕೊಂಬೆಟ್ಟುನಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಭಾಗವಹಿಸಿದ್ದು, ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಪಂದ್ಯಾಟದಲ್ಲಿ ಭಾಗವಹಿಸಿದ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ. ಬಾಲಕರ ತಂಡದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಭವಿಷ್, ತೇಜಸ್ ಪಿ ಕೆ, ಸೃಜನ್, ಗೌತಮ್, ತರುಣ್,...
ಉಡುಪಿಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : `ಮಹೇಶ್ ಶೆಟ್ಟಿ ತಿಮರೋಡಿ’ ಪೊಲೀಸರ ವಶಕ್ಕೆ.- ಕಹಳೆ ನ್ಯೂಸ್

ಉಡುಪಿ: ಧರ್ಮಸ್ಥಳದ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಇಂದು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಉಜಿರೆಯ ನಿವಾಸದಲ್ಲಿ ಬ್ರಹ್ಮಾವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹೇಶ್ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಮಹೇಶ್ ತಿಮರೋಡಿ ವಿಚಾರಣೆಗೆ ಹಾಜರಾಗಿಲ್ಲ....
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ವಿಭಾಗದ ವಾಲಿ ಬಾಲ್ ಪಂದ್ಯಾಟ – ಕಹಳೆ ನ್ಯೂಸ್

ಕಲ್ಲಡ್ಕ:ಯಾವುದೇ ಕ್ರೀಡೆಯಲ್ಲಿ ಶಿಸ್ತು ಮುಖ್ಯವಾಗಿದ್ದು,ಕ್ರೀಡೆಗಳು ಕೇವಲ ಆಟವಲ್ಲ ,ಇದು ಒಗ್ಗಟ್ಟಿನಿಂದ ಆಡುವ ಒಂದು ಆರೋಗ್ಯಕರ ಸ್ಪರ್ಧೆಯಾಗಿದೆ. ಈ ಸ್ಪರ್ಧೆಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಹೇಳಿದರು. ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ...
ದಕ್ಷಿಣ ಕನ್ನಡಪುತ್ತೂರುಮಾರುಕಟ್ಟೆವಾಣಿಜ್ಯಸುದ್ದಿ

ಪಂಜದಲ್ಲಿ ಜನರೇಟರ್ ಕ್ಯಾಂಪ್ ; ಆ. 22, 23ರಂದು ಪೋರ್ಟೇಬಲ್ ಜನರೇಟರ್ ಉಚಿತ ಸರ್ವೀಸ್ ಕ್ಯಾಂಪ್ – ಕಹಳೆ ನ್ಯೂಸ್

ಕುಕ್ಕಿಲ ಎಂಟರ್ ಪ್ರೈಸಸ್ ನೇತೃತ್ವದಲ್ಲಿ ಪೋರ್ಟೇಬಲ್ ಜನರೇಟರ್ ಗಳ ಉಚಿತ ಸರ್ವಿಸ್ ಕ್ಯಾಂಪ್ ಪಂಜ ಕಿಸಾನ್ ಆಗ್ರೋ ಸರ್ವೀಸ್ ನಲ್ಲಿ ಆಗಸ್ಟ್ 22, 23ರಂದು ನಡೆಯಲಿದೆ. ಪೋರ್ಟೇಬಲ್ ಜನರೇಟರ್ ಗಳ ಉಚಿತ ಸರ್ವೀಸ್ ಕ್ಯಾಂಪ್ ಇದಾಗಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಾಟಕ್ಕೆ ಬೇಸತ್ತ ಪಂಜ ಆಸುಪಾಸಿನ ಜನತೆಗೆ ಇದೊಂದು ಸುವರ್ಣಾವಕಾಶ. ಕ್ಯಾಂಪ್ ನಲ್ಲಿ ಜನರೇಟರ್ ಗಳ ಸರ್ವೀಸ್, ರಿಪೇರಿ ಹಾಗೂ ಎಕ್ಸ್’ಚೇಂಜ್ ಸೌಲಭ್ಯವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ, ವಿಟ್ಲ, ನೆಲ್ಯಾಡಿ, ಉಜಿರೆ,...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಪರಸ್ಪರ ಸೌಹಾರ್ದತೆಯಿಂದ ರಾಷ್ಟ್ರ ಸದೃಢವಾಗುತ್ತದೆ – ಡಾ.ವಿಜಯಕುಮಾರ್ ಮೊಳೆಯಾರ್ -ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆಯ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯನ್ನು ಇಂದು ಆಯೋಜಿಸಲಾಯಿತು. ಕಾಲೇಜಿನ ಉಪಪ್ರಾಚಾರ್ಯರಾದ ಡಾ.ವಿಜಯಕುಮಾರ್ ಮೊಳೆಯಾರ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರಸ್ಪರ ಸೌಹಾರ್ದತೆಯಿಂದ ರಾಷ್ಟ್ರ ಸದೃಢವಾಗುತ್ತದೆ. ವಿದ್ಯಾರ್ಥಿಗಳು ಧರ್ಮ, ಭಾಷೆ ಹಾಗೂ ಮತೀಯ ಕಲ್ಪನೆಗಳನ್ನು ಮೀರಿ ಪರಸ್ಪರ ಸೌಹಾರ್ದತೆಯನ್ನು ಕಾಪಾಡಿಕೊಂಡು ಸದ್ಭಾವನೆಯನ್ನು ಮೂಡಿಸಬೇಕೆಂದು ನುಡಿದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ.ವಿನಯಚಂದ್ರ ಸ್ವಾಗತಿಸಿ, ಸಾರ್ವಜನಿಕ...
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿಹೆಚ್ಚಿನ ಸುದ್ದಿ

ಸಾಮಾಜಿಕ ಜಾಲತಾಣಗಳನ್ನು ಬಳಸುವ ಪ್ರತಿಯೊಬ್ಬರೂ ಸೈಬರ್ ಕ್ರೈಂ ಬಗ್ಗೆ ತಿಳುವಳಿಕೆ ಹೊಂದುವುದು ಆವಶ್ಯಕ – ಠಾಣೆಯ ಪಿಎಸ್‍ಐ ಉದಯ ರವಿ -ಕಹಳೆ ನ್ಯೂಸ್

ಪುತ್ತೂರು: ಆಧುನಿಕ ಸಮಾಜದಲ್ಲಿ ಸೈಬರ್ ಅಪರಾಧ ಹಾಗೂ ಮಾದಕ ದ್ರವ್ಯಗಳ ಬಳಕೆ ವ್ಯಾಪಕವಾಗಿ ಹೆಚ್ಚಳವನ್ನುಕಂಡಿದ್ದು, ಇದು ವ್ಯಕ್ತಿಯೊಬ್ಬನ ಚಾರಿತ್ರ್ಯ ಹಾಗೂ ಹಣಕಾಸಿನ ಮೂಲವನ್ನು ನಾಶಮಾಡುತ್ತವೆÉ ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಪ್ರತಿಯೊಬ್ಬರೂ ಸೈಬರ್ ಕ್ರೈಂ ಬಗ್ಗೆ ತಿಳುವಳಿಕೆ ಹೊಂದುವುದು ಆವಶ್ಯಕ ಎಂದು ಪುತ್ತೂರು ಟ್ರಾಫಿಕ್ ಪೆÇೀಲೀಸು ಠಾಣೆಯ ಪಿಎಸ್‍ಐ ಉದಯ ರವಿ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿಯ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿಹೆಚ್ಚಿನ ಸುದ್ದಿ

ಸಂಸ್ಕಾರ ಭಾರತೀ ಯಿಂದ ನಟರಾಜ ಪೂಜನ್, ಉಪನ್ಯಾಸ..ಅಭಿನಂದನೆ ಕಾರ್ಯಕ್ರಮ ; ಕಲೆಯ ಅರಿವಿಗೆ ಪುರಾಣ ಜ್ಞಾನ ಅಗತ್ಯ – ಎಂ ಎಲ್ ಸಾಮಗ-ಕಹಳೆ ನ್ಯೂಸ್

ಮಂಗಳೂರು: ಭಾರತೀಯ ಕಲಾಪ್ರಕಾರಗಳ ಸಾಧನೆಗಾಗಿ ನಮ್ಮ ಪುರಾಣಗಳ ಹಿನ್ನೆಲೆ ಅತ್ಯಗತ್ಯ ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ಕಲಾಚಿಂತಕರೂ ಆದ ಡಾ.ಎಂ.ಎಲ್‌. ಸಾಮಗ ಹೇಳಿದರು. ಅವರು ಮಂಗಳವಾರ ಮಂಗಳೂರಿನ ಸಂಸ್ಕಾರ ಭಾರತಿ ಮಂಗಳೂರು ಮಹಾನಗರ ಘಟಕದ ವತಿಯಿಂದ ಮಂಗಳವಾರ ಸನಾತನ ನಾಟ್ಯಾಲಯದಲ್ಲಿ ನಡೆದ ನಟರಾಜ ಪೂಜನ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಭಾರತೀಯ ತತ್ತ್ವಶಾಸ್ತ್ರವನ್ನು ಪ್ರತಿನಿಧಿಸುವ ನಟರಾಜ‌ ವಿಗ್ರಹವೇ ನಮ್ಮ‌ದೇಶದ‌ಕಲಾ ಶ್ರೀಮಂತಿಕೆಯನ್ನೂ ತತ್ವಶಾಸ್ತ್ರದ ಸಮಗ್ರತೆಯನ್ನೂ ತೋರಿಸಿಕೊಡುತ್ತದೆ ಎಂದರು. ಜ್ಞಾನಕ್ಕಾಗಿ ಈಶ್ವರನೂ,‌ಆರೋಗ್ಯಕ್ಕಾಗಿ ಸೂರ್ಯನನ್ನು...
ಜಿಲ್ಲೆರಾಜ್ಯಸುದ್ದಿಹೆಚ್ಚಿನ ಸುದ್ದಿ

ಆ. 23ರಂದು ಬೆಂಗಳೂರಿನಲ್ಲಿ ಧರ್ಮ ಕ್ಷೇತ್ರ ಉಳಿಸೋಣ ಎಂಬ ಜನಜಾಗೃತಿ ಕಾರ್ಯಕ್ರಮ –ಕಹಳೆ ನ್ಯೂಸ್

ಬೆಂಗಳೂರು : ಸುಮನಾ ಫೌಂಡೇಶನ್ ರಿ. ವತಿಯಿಂದ ಧರ್ಮ ಕ್ಷೇತ್ರ ಉಳಿಸೋಣ ಎಂಬ ಕಾರ್ಯಕ್ರಮವು ಇದೇ ಬರುವ ಆಗಸ್ಟ್ 23ರಂದು ಸಂಜೆ 5.30ಕ್ಕೆ ಬೆಂಗಳೂರಿನ ಸಂಜಯನಗರದಲ್ಲಿರು ಎಂಜಿಎಫ್ ಕಾಲೋನಿಯ ರಾಘವೇಂದ್ರ ಮಠದ ಪರಿಮಳ ಮಂಟಪದಲ್ಲಿ ನಡೆಯಲಿದೆ. ಕೆಳದ ಕೆಲವು ವರ್ಷಗಳಿಂದ ಧರ್ಮಸ್ಥಳ ಶ್ರೀ ಕ್ಷೇತ್ರದ ಮೇಲಿನ ದಾಳಯ ಷಡ್ಯಂತ್ರದ ವಿರುದ್ಧ ಈ ಜನಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜಗದ್ಗುರು ವೀರಶೈವ ಲಿಂಗಾಯುತ ಪಂಚಮ ಸಾಲಿ ಜಗದ್ಗುರು ಪೀಠ ಹರಿಹರದ ಶ್ರೀ...
1 151 152 153 154 155 967
Page 153 of 967