ಹುಲಿವೇಷವು ನಾಡಿನ ಹೆಮ್ಮೆಯ ನೃತ್ಯದ ಆಯಾಮವಾಗಿದೆ;ಸ್ಯಾಂಡಲ್ ವುಡ್ ನಟ ಶರಣ್ -ಕಹಳೆ ನ್ಯೂಸ್
ಮಂಗಳೂರು : ನಾಡಿನ ಬಹಳ ಹೆಮ್ಮೆಯ ನೃತ್ಯದ ಆಯಾಮವಾದ ಹುಲಿವೇಷದ ಊದು ಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತೋಷವಾಗಿದೆ.ಇಲ್ಲಿಗೆ ನಾನು ಬರೀ ಕಲಾವಿದನಲ್ಲದೆ ಕನ್ನಡಿಗನಾಗಿ ಬಂದಿದ್ದೇನೆ.ನಮ್ಮ ನಾಡಿನಲ್ಲಿ ವಿಭಿನ್ನತೆಯಲ್ಲಿ ಏಕತೆಯನ್ನ ಕಾಣಲು ಮಂಗಳೂರೆ ಸ್ಪಷ್ಟ ನಿದರ್ಶನವಾಗಿದೆಯೆಂದು ಸ್ಯಾಂಡಲ್ ವುಡ್ನ ಖ್ಯಾತ ನಾಯಕನಟ ಶರಣ್ ಅಭಿಪ್ರಾಯಪಟ್ಟರು. ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಕುಂಪಲ ಆದಿಶಕ್ತಿ ಕ್ರಿಕೆಟರ್ಸ್ ವತಿಯಿಂದ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಶುಕ್ರವಾರದಂದು ಕುಂಪಲದ ಆದಿಶಕ್ತಿ...







