ಪುತ್ತೂರು ಮುರದಲ್ಲಿ ಹೊಸ ಬಾರ್ ರೆಸ್ಟೋರೆಂಟ್ ಮುಚ್ಚುವಂತೆ ಸ್ಥಳೀಯರ ಆಗ್ರಹ, ಅಬಕಾರಿ ಅಧಿಕಾರಿಯ ವಾಹನಕ್ಕೆ ಘೇರಾವ್ – ಕಹಳೆ ನ್ಯೂಸ್
ಪುತ್ತೂರು, ಜೂ 22 : ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ ಎಂಬಲ್ಲಿ ತೆರೆಯಲಾಗಿರುವ ಹೊಸ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದು, ಸೋಮವಾರ ಸ್ಥಳಕ್ಕೆ ಸಮಸ್ಯೆಯನ್ನು ಸ್ಪಷ್ಟಪಡಿಸಲು ಆಗಮಿಸಿದ ಅಬಕಾರಿ ಅಧಿಕಾರಿಯ ವಾಹನವನ್ನು ಸ್ಥಳೀಯರು ಘೇರಾವ್ ಮಾಡಿದ್ದಾರೆ. ಸಮಾಜ ಸೇವಕ ಸುದರ್ಶನ್ ಸ್ಥಳೀಯರ ನೇತೃತ್ವ ವಹಿಸಿ ಮಾತನಾಡಿದ್ದು, 'ಮುರಾದ ಜನವಸತಿ ಪ್ರದೇಶದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವುದು ತಪ್ಪು. ಈ ಹಿಂದೆ ಪ್ರೀತಂ ಹೆಸರಿನ...







