ಶ್ರೀಕೃಷ್ಣ ಮಂದಿರ ಅಮ್ಟೂರಿನಲ್ಲಿ ಒಡಿಯೂರು ಸ್ವಾಮೀಜಿಯವರ ಷಷ್ಠ್ಯಬ್ದಿ ಸಂಭ್ರಮ-ಕಹಳೆ ನ್ಯೂಸ್
ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಇವರ 60ನೇ ವರ್ಷದ ಜನ್ಮ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ವಿವಿಧ ತಾಲೂಕುಗಳಲ್ಲಿ ಆಚರಿಸುವುದೆಂದು ನಿಶ್ಚಯಿಸಲಾಯಿತು. ಕಾರ್ಯಕ್ರಮವು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ಸಮಾಜಕ್ಕೆ ಸಂದೇಶವನ್ನು ನೀಡುವ ಕಾರ್ಯಕ್ರಮವೇ ಆಗೆಬೇಕೆಂದು ಮೂಲ ಉದ್ದೇಶವಾಗಿದೆ. ಅದರಂತೆ ಕಲ್ಲಡ್ಕ ಸುತ್ತ ಮುತ್ತಲಿನ ಗ್ರಾಮಗಳು ಸೇರಿದಂತೆ ಕಲ್ಲಡ್ಕ ವಲಯದ ಸರಣಿ ಕಾರ್ಯಕ್ರಮವನ್ನು ಅಮ್ಟೂರು ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಮನೋಜ್ ಕಟ್ಟೆಮಾರ್, ಮಂತ್ರದೇವತಾ ಸಾನಿಧ್ಯ ಕಟ್ಟೆಮಾರ್, ಅಮ್ಟೂರು ಇವರು ದೀಪ...







