ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯನಕ್ಕೆ 50 ದಿನದ ಸಂಭ್ರಮ- ಕಹಳೆ ನ್ಯೂಸ್
ಸನಾತನ ನಿರ್ಮಿತ ಗ್ರಂಥಗಳೆಂದರೆ ಈಶ್ವರೀ ಚೈತನ್ಯ, ಹಾಗೆಯೇ ಆನಂದ ಮತ್ತು ಶಾಂತಿಯ ಅನುಭೂತಿಯನ್ನು ನೀಡುವ ಸಾಹಿತ್ಯವಾಗಿವೆ. ಸನಾತನದ ಗ್ರಂಥಗಳಲ್ಲಿನ ದಿವ್ಯ ಜ್ಞಾನವನ್ನು ಸಮಾಜದ ವರೆಗೆ ತಲುಪಿಸಲು ಸನಾತನದ ವತಿಯಿಂದ ರಾಜ್ಯದಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನವನ್ನು ಹಮ್ಮಿಕೊಂಡಿದೆ. ಸನಾತನದ ಗ್ರಂಥಗಳು ಸಮಾಜದ ಪ್ರತಿಯೊಬ್ಬ ಜಿಜ್ಞಾಸು, ಮುಮುಕ್ಷು ಮುಂತಾದವರ ವರೆಗೆ ತಲುಪಿ ಅವರಿಗೂ ಈ ಜ್ಞಾನಶಕ್ತಿಯ ಲಾಭವಾಗಬೇಕೆಂಬುದು ಈ ಅಭಿಯಾನದ ಉದ್ದೇಶವಾಗಿದೆ. ಜಗದ್ಗುರು ಭಗವಾನ್ ಶ್ರೀಕೃಷ್ಣ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು...