ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೫
" ಸಾಗರ " ಸಾಗರವೇ ಶಿವ ಪಾಗರವೇ ಸಗರನ ನಗರವೇ ಭೂಶಿರ I ಸಾಹಸಿಗೆ ಸುಲಭ ಸಹಜವು ಕಠಿಣವು ಸಂಸಾರ ಸಾಗರ II ಸಾಗರದಲೆಗಳು ಬಡಿದೆಬ್ಬಿಸುತಲಿವೆ ಹಳೆನೆನಪಿನ ಮಹಪೂರ I ವಿಶಾಲವಾದ ಅಂಬರದಾಚಿನ ಮೊಳೆಯುವ ನವಯುಗ ಚಿತ್ತಾರ II ಸೂರ್ಯ ರಶ್ಮಿಯು ಮೆಲುಕಾಡುತಲಿದೆ ಹೃದಯಂಗಳದ ಮಂಗಳ I ಚಂದಿರನ ಹೂನಗೆಮಲ್ಲಿಗೆ ತೆರದಲೆ ಸೆಳೆದೋಡಿವೆ ಕಂಗಳ II ಸಾಗರದೊಳು ಒಳಹುದುಗಿವೆ ಏನೋ ಹೊಳಹೊಳಪ ವಜ್ರಗಳು I ಹುಡುಕಾಡುತ ಒಳ ಒಳ ಹೋದರೆ...