ಅವಸಾನದತ್ತ ದೇವಿಕುಂಟೆ ಗಿರಿಯ ಕೋಟೆ, ಕಲ್ಯಾಣಿ, ಬಾವಿ & ಸ್ಮಾರಕಗಳು; ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ-ಪುರಾತತ್ವ ಇಲಾಖೆ, ಭಾಗ್ಯನಗರ ಆಗುವ ಮುನ್ನವೇ ಕಳಾಹೀನವಾದ ಬಾಗೇಪಲ್ಲಿ-ಕಹಳೆ ನ್ಯೂಸ್
ಬಾಗೇಪಲ್ಲಿ : ತಾಲೂಕಿನ ವಿವಿಧ ಬೆಟ್ಟಗಳ ಮೇಲೆ ಕೋಟೆಗಳನ್ನು ನಿರ್ಮಿಸಿಕೊಂಡು ಆಡಳಿತ ನಡೆಸಿದ ಪಾಳೇಗಾರರು ಹಾಗೂ ಬೆಟ್ಟದ ಮೇಲಿನ ದೇಗುಲಗಳ ಸಮೀಪ ಪೂರ್ವಜರು ಕುಡಿಯುವ ನೀರಿನ ಅಸರೆಗಾಗಿ ಶತಮಾನಗಳ ಹಿಂದೆಯೇ ನಿರ್ಮಿಸಿರುವ ಇತಿಹಾಸಿಕ ಮಹತ್ವದ ಕಲ್ಯಾಣಿಗಳು ಈಗ ಅವಸನಾದ ಅಂಚಿಗೆ ತಲುಪಿವೆ. ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಅಪರೂಪದ ಐತಿಹಾಸಿಕ ಸ್ಮಾರಕಗಳ ಮೇಲಿನ ನಿರ್ಲಕ್ಷ್ಯದಿಂದ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ಸ್ಮಾರಕಗಳಿಗೆ ಅವನತಿಯ ಗತಿ ಹಿಡಿದೆ. ನೈಜ ಭಾಗ್ಯನಗರದ ಬೆಡಗು ನಾಶವಾಗುತ್ತದೆ!! ತಲೆ...







