Wednesday, March 18, 2026

ರಾಜ್ಯ

ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನಾಳೆ ಮಂಗಳೂರಿಗೆ ಭೇಟಿ ; ಗುರುಪುರ ಕಂಬಳ ದರ್ಗಾ ಭೇಟಿ‌ – ಕೈಕಂಬದ ವಸ್ತು ಪ್ರದರ್ಶನ ಮೈದಾನದಲ್ಲಿ ಸಾರ್ವಜನಿಕ ಸಭೆ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮೇ 1ರಂದು ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕುರಿತು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರುಕ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನ ಕೃಷ್ಣಾಪುರದ ಫಿಝ ಗಾರ್ಡನ್ ಹೆಲಿಪಾಡ್‌ಗೆ ಅಗಮಿಸಲಿದ್ದು, ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬಳಿಕ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬಲವಂಡಿ ದೈವಸ್ಥಾನ, ಗುರುಪುರ ಕಂಬಳ ದರ್ಗಾ ಭೇಟಿ‌ ನೀಡಲಿದ್ದಾರೆ....
ಉಡುಪಿರಾಜಕೀಯರಾಜ್ಯಸುದ್ದಿ

‘ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗೆ ಹರಸಿ’- ಮತದಾರರಿಗೆ ಸುನೀಲ್ ಕುಮಾರ್ ವಿನಂತಿ – ಕಹಳೆ ನ್ಯೂಸ್

ಕಾರ್ಕಳ, ಏ 27 : ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ನನಗೆ ನೀಡಿ, ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗಾಗಿ ಹರಸಿ ಆಶೀರ್ವದಿಸಿ” ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸುನೀಲ್ ಕುಮಾರ್ ಹೇಳಿದರು. ಕಾರ್ಕಳ ವಿಧಾನಸಭಾ ಕ್ಷೇತ್ರದ ಮುಡಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿ ಮಾತನಾಡಿದ ಅವರು “ಮಕ್ಕಳಿಗೆ ಸೈಕಲ್ ನೀಡುವ ಯೋಜನೆ ಆರಂಭವಾಗಿದ್ದೇ ಬಿಜೆಪಿ ಸರಕಾರದಲ್ಲಿ. ಉಜ್ವಲ ಯೋಜನೆ ಮನೆ ಮನೆ...
ಕ್ರೈಮ್ರಾಜ್ಯಸುದ್ದಿಹಾಸನ

ಮೊಬೈಲ್ ಕಳೆದು ಹೋದ್ರೆ ಇನ್ಮುಂದೆ ಹುಡುಕುವುದು ತೀರ ಸುಲಭ..! ಹಾಸನ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದೇನು.!?? – ಕಹಳೆ ನ್ಯೂಸ್

ಹಾಸನ: ಮೊಬೈಲ್ ಪೋನ್ ಏನಾದರೂ ಕಳೆದು ಹೋಗಿದ್ದರೇ ಇನ್ಮುಂದೆ ಹುಡುಕುವುದು ತೀರ ಸುಲಭ. 8277959500 ಈ ಸಂಖ್ಯೆಗೆ ಹಾಯ್ ಎಂದು ಕಳುಹಿಸಿದ್ರೆ ನಿಮ್ಮ ವಾಟ್ಸಾಪ್ ಗೆ ಲಿಂಕ್ ಬರುತ್ತದೆ. ಅದರಲ್ಲಿ ನಿಮ್ಮ ಡಿಟೈಲ್ಸ್ ಕಳುಹಿಸಿದರೇ ಶೀಘ್ರವೇ ಮೊಬೈಲ್ ನ್ನು ಪೊಲೀಸರು ಹುಡುಕಿ ವಾಪಸ್ ಕೊಡಲಿದ್ದಾರೆ. ಯಾರಾದರೂ ಸೆಕೆಂಡ್ ಮೊಬೈಲ್ ಖರೀದಿ ಮಾಡಲು ಯೋಚನೆ ಮಾಡಿದ್ದರೇ ಸಲ್ಪ ಯೋಚಿಸಿ ಖರೀದಿ ಮಾಡುವುದು ಉತ್ತಮ. ಏಕೆಂದರೇ ನೀವು ಕಳ್ಳತನದ ಮೊಬೈಲ್ ಖರೀದಿ ಮಾಡಿದ್ದರೇ ನೀವು...
ದಕ್ಷಿಣ ಕನ್ನಡಮೂಡಬಿದಿರೆರಾಜಕೀಯರಾಜ್ಯಸುದ್ದಿ

ಮೇ 3ರಂದು ಕರಾವಳಿಗೆ ಪ್ರಧಾನಿ ನರೇಂದ್ರ ಮೋದಿ ; ಸಮಾವೇಶಕ್ಕೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕೊಲ್ನಾಡಿನಲ್ಲಿ ಭರದ ಸಿದ್ಧತೆ – ಕಹಳೆ ನ್ಯೂಸ್

ಮಂಗಳೂರು: ಚುನಾವಣೆಯ ಕಾವು ಕರಾವಳಿಯಲ್ಲಿ ಹೆಚ್ಚಾಗುತ್ತಿದ್ದಂತೆ ಅಬ್ಬರದ ಪ್ರಚಾರಕ್ಕೆ ಪಕ್ಷಗಳು ಅಣಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಕರಾವಳಿಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿ ಪಾಳಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸಮಾವೇಶ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಲಾ°ಡಿನಲ್ಲಿ ನಡೆಯಲಿದ್ದು, ಸಕಲ ತಯಾರಿ ಭರದಿಂದ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಕೊಲ್ನಾಡು ಬಸ್‌ ತಂಗುದಾಣದ ಬಳಿಯ ಗದ್ದೆ ಪ್ರದೇಶವನ್ನು...
ಉಡುಪಿರಾಜಕೀಯರಾಜ್ಯಸುದ್ದಿ

ಉಡುಪಿ ಬಿಜೆಪಿ ಕಚೇರಿಯಲ್ಲಿ ಚುನಾವಣ ನಿರ್ವಹಣ ತಂಡದೊಂದಿಗೆ ಬಿ.ಎಲ್.ಸಂತೋಷ್ ಸಭೆ – ಕಹಳೆ ನ್ಯೂಸ್

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ರವಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚುನಾವಣ ನಿರ್ವಹಣ ಸಮಿತಿಯ ಸಭೆ ನಡೆಸಿ ಜಿಲ್ಲೆಯ ಎಲ್ಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಳಕ್ಕೆ ಬೇಕಿರುವ ಕ್ರಮ ಮತ್ತು ತುರ್ತಾಗಿ ಆಗಬೇಕಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಕೆಲವೊಂದು ವಿಭಾಗದಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಆಗದಿರುವ ಬಗ್ಗೆ ಸೂಚನೆ ನೀಡಿದರು. ಜಿಲ್ಲೆಯ ಪ್ರಮುಖರಿಂದ ವಿಧಾನಸಭಾ ಕ್ಷೇತ್ರವಾರು ಯುವ ಮತದಾರರು, ಮಹಿಳಾ ಮತದಾರರು, ಜಾತಿವಾರು...
ರಾಜ್ಯರಾಷ್ಟ್ರೀಯಸುದ್ದಿ

ಸಂವಿಧಾನಕ್ಕೆ ರಕ್ಷಣೆ ನೀಡಿದ್ದ ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣಕ್ಕೆ 50 ವರ್ಷ ; ಕೇಶವಾನಂದ ಭಾರತೀ ಪ್ರಕರಣ ಅಂದರೇನು ಮತ್ತು ಅದರ ಮಹತ್ವ ಏನು? – ಕಹಳೆ ನ್ಯೂಸ್

ಭಾರತೀಯ ನ್ಯಾಯಾಂಗ ಇತಿಹಾಸದಲ್ಲೇ 'ಕೇಶವಾನಂದ ಭಾರತೀ ವರ್ಸಸ್‌ ಕೇರಳ ಸರಕಾರ' ಪ್ರಕರಣ ಪ್ರಮುಖವಾದುದು. ಸಂವಿಧಾನದ ಮೂಲ ಸ್ವರೂಪ ಉಳಿಸಿದ ಪ್ರಕರಣ ಎಂದೇ ಕೊಂಡಾಡಲ್ಪಡುವ ಈ ಪ್ರಕರಣ, ತೀಪು ಇತ್ಯಾದಿಗಳ ಹಿನ್ನೆಲೆ ಮುನ್ನೆಲೆಗಳು ಇಲ್ಲಿವೆ. ಕೇರಳದ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ನಿಧನರಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅವರು ಹೂಡಿದ್ದ ದಾವೆಯು ‘ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ’ ಪ್ರಕರಣ ಎಂದೇ ಖ್ಯಾತವಾಗಿದೆ. ಪ್ರಜಾಸತ್ತಾತ್ಮಕ ದೇಶವೊಂದರ ಭವಿಷ್ಯಕ್ಕೆ ಈ ಪ್ರಕರಣ ಒಂದು...
ಉಡುಪಿರಾಜಕೀಯರಾಜ್ಯಸುದ್ದಿ

ಮುಂಬೈ ಬಂಟ ಬಾಂಧವರೊಂದಿಗೆ ಸಭೆ ನಡೆಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ – ಕಹಳೆ ನ್ಯೂಸ್

ಕಾರ್ಕಳ : ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಮುಂಬೈ ಬಂಟ ಬಾಂಧವರೊಂದಿಗೆ ಸಭೆ ನಡೆಸಿದರು. ಮುಂಬಯಿನಲ್ಲಿ ನಿನ್ನೆ ಬಂಟ ಸಮುದಾಯದ ಸಭೆ ನಡೆಸಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯಕುಮಾರ್ ಶೆಟ್ಟಿ ಮುನಿಯಾಲು ಬಂಟ ಜಾತಿಯವನಾದ ನನಗೆ ಮತ ನೀಡಿ ನನ್ನನ್ನು ನೀವು ಗೆಲ್ಲಿಸುವಂತೆ ಕರೆ ನೀಡಿದ್ದಾರೆ....
ಕ್ರೈಮ್ರಾಜಕೀಯರಾಜ್ಯರಾಷ್ಟ್ರೀಯಸುದ್ದಿ

‘ ವೋಡ್ಕಾ ಕುಡಿತಿಯಾ ಅಂತ ಕೇಳಿದ್ರು ‘ ಯುವ ಕಾಂಗ್ರೆಸ್‌ ನಾಯಕಿಗೆ 6 ತಿಂಗಳಿಂದ ನಿರಂತರ ಕಿರುಕುಳ ; ಯೂತ್​ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ವಿರುದ್ಧ ಎಫ್‌ಐಆರ್..! ಕರ್ನಾಟಕದತ್ತ ಅಸ್ಸೋಂ ಪೊಲೀಸರ ತಂಡ – ಕಹಳೆ ನ್ಯೂಸ್

ಬೆಂಗಳೂರು : ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ವಿರುದ್ಧ ಕಿರುಕುಳ ಮತ್ತು ತಾರತಮ್ಯ ಆರೋಪ ಮಾಡಿದ್ದ ಅಸ್ಸೋಂ ಕಾಂಗ್ರೆಸ್ ಯುವ ಘಟಕದ ನಾಯಕಿ ಇದೀಗ ಎಫ್​ಐಆರ್ ದಾಖಲಿಸಿದ್ದಾರೆ. ಗುವಾಹಟಿ (ಅಸ್ಸೋಂ) ಪಕ್ಷದಿಂದ ಉಚ್ಛಾಟನೆಗೊಂಡ ಬೆನ್ನಲ್ಲೇ ಅಸ್ಸೋಂ ಯುವ ಕಾಂಗ್ರೆಸ್‌ ನಾಯಕಿಯೊಬ್ಬರು ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ವಿರುದ್ಧ ಕಿರುಕುಳ ಮತ್ತು ತಾರತಮ್ಯ ಆರೋಪ ಮಾಡಿ, ಎಫ್​ಐಆರ್ ದಾಖಲಿಸಿದ್ದಾರೆ.‌ ಅಸ್ಸೋಂ ಪೊಲೀಸರು ಶನಿವಾರ...
1 174 175 176 177 178 274
Page 176 of 274