ಕತಾರಿನಲ್ಲಿ ಸುಪ್ರಸಿದ್ಧ ನಟಿ ಹಾಗು ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ಹಾಗೂ ಕನ್ನಡ ಚಲನ ಚಿತ್ರರಂಗದ ನಿರ್ಮಾಪಕ, ನಟ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ವಿಶೇಷ ಸನ್ಮಾನ-ಕಹಳೆ ನ್ಯೂಸ್
ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿರುವ ಅಶೋಕ ಸಭಾಂಗಣದಲ್ಲಿ ಸುಪ್ರಸಿದ್ಧ ನಟಿ ಹಾಗು ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ಅವರಿಗೆ ಹಾಗೂ ಕನ್ನಡ ಚಲನ ಚಿತ್ರರಂಗದ ನಿರ್ಮಾಪಕ, ನಟ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಕರ್ನಾಟಕದಿಂದ ಆಗಮಿಸಿದ್ದ ಗಣ್ಯರು, ಕತಾರಿನ ದೋಹಾ ನಲ್ಲಿ ದಕ್ಷಿಣ ಭಾರತದ ಪ್ರತಿಭಾನ್ವೇಷಣೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಐ ಸಿ ಸಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ...







