Thursday, May 14, 2026
ದಕ್ಷಿಣ ಕನ್ನಡಬಂಟ್ವಾಳ

ಕೆದಿಲದಿಂದ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಖದೀಮರು : ಹಿಂದುಜಾಗರಣ ವೇದಿಕೆ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ : 2 ಹಸುಗಳನ್ನು ಮನೆಯೊಂದರ ಅಂಗಳದಲ್ಲಿ ಕಟ್ಟಿ ಪರಾರಿ -ಕಹಳೆ ನ್ಯೂಸ್

ಅಕ್ರಮವಾಗಿ ಗೋ ಸಾಗಾಟ ಮಾಡ್ತ ಇದ್ದ ಖದೀಮರು ಪೊಲೀರನ್ನ ಕಂಡು ಪರಾರಿಯಾದ ಘಟನೆ ನಡೆದಿದೆ. ಕೆದಿಲದಿಂದ ಅಕ್ರಮ ಗೋ ಸಾಗಾಟ ಮಾಡ್ತಾ ಇದ್ದ ಬಗ್ಗೆ ಕಲ್ಲಡ್ಕದಲ್ಲಿ ಹಿಂದುಜಾಗರಣ ವೇದಿಕೆಯ ಕಾರ್ಯಕರ್ತರು ಪೊಲಿಸರಿಗೆ ಮಾಹಿತಿಯನ್ನ ನೀಡಿದ್ದಾರೆ.

ಮಾಹಿತಿ ಮೇರೆಗೆ ಎಡಿಶನಲ್ ಎಸ್‌ಪಿ ಅವರ ನೇತ್ರತ್ವದಲ್ಲಿ, ವಿಟ್ಳ ಠಾಣೆಯ ಪಿಎಸ್‌ಐ ಸಂದೀಪ ಶೆಟ್ಟಿ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗೋ ಸಾಗಾಟ ಮಾಡ್ತಾ ಇದ್ದ ಖದೀಮರು ಮಾರುತಿ ಓಮಿನಿಯಲ್ಲಿದ್ದ ಎರಡು ಹಸುಗಳನ್ನು ಮನೆಯೊಂದರ ಅಂಗಳದಲ್ಲಿ ಕಟ್ಟಿ, ಪರರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೆದಿಲ ಮೂಲದ 4 ಗೋ ವ್ಯಾಪಾರಿಗಳು ನಾಪತ್ತೆಯಾಗಿದ್ದಾರೆ ಎನ್ನೋ ಮಹಿತಿ ಲಭ್ಯವಾಗಿದೆ. ಇನ್ನು ಆರೋಪಿಗಳು ಬಳಸಿದ ಹೋಂಡ ಆಕ್ಟಿವ ಪೋಲೀಸರ ವಶವಾಗಿದೆ.