Recent Posts

Saturday, April 25, 2026
ದಕ್ಷಿಣ ಕನ್ನಡಸುದ್ದಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿ ಪ್ರಕಟ- ಕಹಳೆ ನ್ಯೂಸ್

ಮಂಗಳೂರು: ತುಳು ರಂಗಭೂಮಿ ನಟ ಕೃಷ್ಣಪ್ಪ ಉಪ್ಪೂರು, ತುಳು ಜಾನಪದ ಕ್ಷೇತ್ರದ ಸಂಜೀವ ಬಂಗೇರ ಮತ್ತು ತುಳು ಸಾಹಿತ್ಯ ಕ್ಷೇತ್ರದ ಉಲ್ಲಾಸ ಕೃಷ್ಣ ಪೈ ಪುತ್ತೂರು ಸಹಿತ ಮೂವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಂಗಳೂರು: ತುಳು ರಂಗಭೂಮಿ ನಟ ಕೃಷ್ಣಪ್ಪ ಉಪ್ಪೂರು, ತುಳು ಜಾನಪದ ಕ್ಷೇತ್ರದ ಸಂಜೀವ ಬಂಗೇರ ಮತ್ತು ತುಳು ಸಾಹಿತ್ಯ ಕ್ಷೇತ್ರದ ಉಲ್ಲಾಸ ಕೃಷ್ಣ ಪೈ ಪುತ್ತೂರು ಸಹಿತ ಮೂವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತುಳು ಸಾಹಿತ್ಯ ಅಕಾಡೆಮಿಯ 2021 ನೇ ಸಾಲಿನ ಗೌರವ ಪ್ರಶಸ್ತಿ, ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪ್ರಶಸ್ತಿ, ಮಾಧ್ಯಮ ಪುರಸ್ಕಾರ ಹಾಗೂ ಪುಸ್ತಕ ಬಹುಮಾನ ವಿಜೇತರ ವಿವರಗಳನ್ನು ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ ಅವರು ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

ಪುಸ್ತಕ ಬಹುಮಾನ ಯೋಜನೆಗೆ ಕವನ ಸಂಕಲನ ವಿಭಾಗದಲ್ಲಿ ಯೋಗೀಶ್‌ ಕಾಂಚನ್‌ ಬೈಕಂಪಾಡಿ ಅವರ ತಂಞನ ಬೊಳ್ಳಿ, ನಾಟಕ ವಿಭಾಗದಲ್ಲಿ ಅಕ್ಷತಾರಾಜ್‌ಪೆರ್ಲ ಅವರ ಬೇಲಿ, ಸಾಪೊದ ಕಣ್ಣ್‌, ಆಧ್ಯಯನ ವಿಭಾಗದಲ್ಲಿ ಡಾ. ಅಶೋಕ್‌ ಆಳ್ವ ಸುರತ್ಕಲ್‌ ಅವರ ತುಳುನಾಡಿನ ಪ್ರಾಣಿ ಜಾನಪದ ಕೃತಿಗಳು ಆಯ್ಕೆಯಾಗಿವೆ ಎಂದರು.

2021 ನೇ ಸಾಲಿನ ವಿಶೇಷ ಪುರಸ್ಕಾರ ವಿಭಾಗದಲ್ಲಿ ಬಾಲ ಪ್ರತಿಭಾ ಪುರಸ್ಕಾರಕ್ಕೆ ನಿರೀಕ್ಷಾ ಕೋಟ್ಯಾನ್‌ ಕೋಡಿಕೆರೆ, ಜೀವಿಕಾ ಶೆಟ್ಟಿ ಮುಂಬಯಿ, ಸಾನ್ವಿ ಯುಎಸ್‌ಎ, ಯುವ ಸಾಧಕ ಪುರಸ್ಕಾರ ವಿಭಾಗದಲ್ಲಿ ಹರಿಪ್ರಸಾದ್‌ ನಂದಳಿಕೆ, ಚಿನ್ಮಯಿ ಮೋಹನ್‌ ಸಾಲಿಯಾನ್‌ ಮುಂಬಯಿ,

ರಮಾನಂದ ಶೆಟ್ಟಿ ಒಮಾನ್‌, ಮಾಧ್ಯಮ ಪುರಸ್ಕಾರಕ್ಕೆ ಶಶಿ ಬಂಡಿಮಾರ್‌ಮತ್ತು ರೋನ್ಸ್ ಬಂಟ್ವಾಳ್‌, ಸಂಘಟನಾ ಪುರಸ್ಕಾರಕ್ಕೆ ಜೈ ತುಳುನಾಡು, ತುಳು ಕೂಟ ಫೌಂಡೇಶನ್‌ ನಾಲಸೋಪಾರ ಮುಂಬಯಿ ಹಾಗೂ ತುಳು ಕೂಟ ಕತಾರ್‌ ಸಂಘಟನೆ ಆಯ್ಕೆಯಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ, ನಾಗೇಶ್‌ ಕುಲಾಲ್‌, ರಿಜಿಸ್ಟ್ರಾರ್‌ ಕವಿತಾ ಅವರು ಉಪಸ್ಥಿತರಿದ್ದರು.