Saturday, March 14, 2026
ಸುದ್ದಿ

ವಿವೇಕಾನಂದ ಕಾಲೇಜಿನಿಂದ ಕುಡಿಪ್ಪಾಡಿಯಲ್ಲಿ ಗ್ರಾಮ ವಿಕಾಸ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಇಂದು ದಿನನಿತ್ಯದ ಬದುಕಿಗೆ ಬೇಕಾಗುವ ಆಹಾರ ಉತ್ಪನ್ನಗಳನ್ನು ಬೆಳಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲು ಪೌಷ್ಟಿಕ ಆಹಾರಗಳ ಕೊರತೆ ಎದ್ದು ಕಾಣುತ್ತಿದೆ. ಇಂತಹಾ ಸಮಯದಲ್ಲಿ ಪ್ರಕೃತಿದತ್ತವಾಗಿ ದೊರಕುವ ವಸ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕಾಗುತ್ತದೆ.

ಹಾಗೂ ಮುಂದೆ ಆಹಾರದ ಕೊರತೆ ಎದುರಾಗುವಂತಹ ಸಮಯ ಬಂದರೆ ನೈಸರ್ಗಿಕವಾಗಿ ಸಿಗುವಂತಹ ಆಹಾರಗಳ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕುಡಿಪ್ಪಾಡಿ ಗ್ರಾಮಸ್ಥ ಹಾಗೂ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ನಾರಾಯಣ ಜೋಯಿಸ್ ಹೇಳಿದರು.
ವಿವೇಕಾನಂದ ಕಾಲೇಜಿನ ಗ್ರಾಮ ವಿಕಾಸ ಸಮಿತಿ, ಎನ್.ಎಸ್.ಎಸ್. ಘಟಕ ಹಾಗೂ ರೆಡ್‍ಕ್ರಾಸ್‍ನ ಸಹಯೋಗದಲ್ಲಿ ಕುಡಿಪ್ಪಾಡಿಯ ‘ಗ್ರಾಮ ವಿಕಾಸ’ ಕಾರ್ಯಕ್ರಮದಲ್ಲಿ ‘ಶ್ರೀತಾಳ ವೃಕ್ಷದ ಸದ್ಬಳಕೆ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಶ್ರೀತಾಳ ವೃಕ್ಷವು ಸುಮಾರು 60ರಿಂದ 70ವರ್ಷಗಳ ಕಾಲ ಬದುಕುತ್ತದೆ. ಇದರ ವಿಶೇಷತೆ ಎಂದರೆ ಇದರ ಅಂತ್ಯಕಾಲದಲ್ಲಿ ಮಾತ್ರ ಇದು ರಥದ ರೀತಿಯಲ್ಲಿ ಹೂವನ್ನು ಬಿಡುತ್ತದೆ ಹಾಗೂ ನಂತರದ ಒಂದು ವರ್ಷದೊಳಗಾಗಿ ಸಾಯುತ್ತದೆ. ಆದರೆ ಇದರ ಕಾಂಡದಿಂದ ಎಲೆಯವರೆಗೂ ಔಷಧಯುಕ್ತ ಗುಣಗಳನ್ನು ಹೊಂದಿದ್ದು ಅನೇಕ ಕಾಯಿಲೆಗಳಿಗೆ ಮದ್ದಾಗಿ ಬಳಸ ಬಹುದಾಗಿದೆ. ಆದರೆ ಇದನ್ನು ಬಳಸಲು ಅದು ಹೂಬಿಡುವ ವರೆಗೂ ಕಾಯಲೇ ಬೇಕಾಗಿದೆ. ಅಷ್ಟೇ ಅಲ್ಲದೆ ಇದರಿಂದ ಹೊರತೆಗೆಯ ಬಹುದಾದ ಹಿಟ್ಟನ್ನು ದಿನನಿತ್ಯದ ಪೌಷ್ಟಕ ಆಹಾರವಾಗಿಯೂ ಉಪಯೋಗಿಸಬಹುದಾಗಿದೆ. ಆದರೆ ಇದರ ಬಗ್ಗೆ ಇಂದು ಹೆಚ್ಚಿನವರಿಗೆ ಅರಿವಿಲ್ಲ. ಇದರ ಕೆಲಸ ಕಾರ್ಯಗಳು ಕಷ್ಟವಾದ ಕಾರಣ ಮತ್ತು ಹೆಚ್ಚಿನ ಕೈಗೆಲಸವಿರುವುದರಿಂದ ತಿಳಿದವರೂ ಶ್ರೀತಾಳ ಮರದ ಸದ್ಬಳಕೆ ಮಾಡಲು ಮುಂದಾಗುತ್ತಿಲ್ಲ ಎಂದು ನುಡಿದರು.
ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ ಡಾ. ಶ್ರೀಕುಮಾರ್ ಈಶ್ವರಮಂಗಲ ಮಾತನಾಡಿ, ಅಧ್ಯಯನ, ಅಧ್ಯಾಪನ, ಆಚರಣೆ ಹಾಗೂ ಪ್ರಕರಣದಿಂದ ಜೀವನದಲ್ಲಿ ಹೊಸತನ್ನು ಸಾಧಿಸಬಹುದು. ಹಾಗೂ ಹಲವು ಬಲ್ಲವರಿಂದ ಹೊಸಾ ವಿಷಯಗಳನ್ನು ಸದಾಕಲಿಯುತ್ತಿರಬೇಕು. ಆಗ ಬದುಕು ಚೈತನ್ಯದಾಯಕವಾಗಿರುತ್ತದೆ. ಪ್ರಸ್ತುತ ಎಲ್ಲರೂ ಪ್ರಚಾರದ ಮುಖ ಮಾಡುತ್ತಿದ್ದಾರೆ. ಅದರ ಬದಲಾಗಿ ತಿಳಿವಳಿಕೆಯತ್ತ ಹೆಜ್ಜೆ ಹಾಕಾಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ. ಭಟ್ ಮಾತನಾಡಿ, ಕಲಿಕೆ ಎಂಬುದು ನಾಲ್ಕು ಗೂಡೆಗಳ ಮಧ್ಯೆ ಸೀಮಿತವಾಗಬಾರದು. ಪರಿಸರದಿಂದ ಜನರ ಸಮುಹಗಳತ್ತ ಹೋದಾಗ ಇಲ್ಲಿ ಜೀವನಕ್ಕೆ ಅಗತ್ಯವಾದ ಪಾಠಗಳು ದೊರೆಯುತ್ತದೆ. ಇನ್ನು ವಿದ್ಯಾರ್ಥಿಗಳು ಹಳ್ಳಿಗಳಿಗೆ ತೆರಳಿ ಅಲ್ಲಿನ ಸೊಗಡು ಹಾಗೂ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಅದರಿಂದ ಬದುಕಿನಲ್ಲಿ ಹೊಸತನವನ್ನು ರೂಪಿಸಿಕೊಂಡಂತೆ ಆಗುತ್ತದೆ ಎಂದು ನುಡಿದರು.
ಸಭಾ ಕಾರ್ಯಕ್ರಮದ ನಂತರ ಕುಡಿಪ್ಪಾಡಿ ದೇವಸ್ಥಾನದ ಗದ್ದೆಯ ಸ್ವಚ್ಛತಾ ಕಾರ್ಯ ಹಾಗೂ ಶ್ರೀತಾಳ ಮರದ ಬಳಕೆಯ ಕಾರ್ಯ ವೈಖರಿಯ ರೀತಿಯನ್ನು ಪ್ರಾಯೋಗಿಕವಾಗಿ ಮಾಡಿತೋರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಡಿಪ್ಪಾಡಿ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ರಾಮ್ ಜೋಯಿಸ್, ದೇವಸ್ಥಾನದ ಮುಖಸ್ಥ ಜನಾರ್ದನ ಯರ್ಕಡಿತ್ತಾಯ, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಉಪಸ್ಥಿತರಿದ್ದರು.
ಕಾಲೇಜಿನ ಗ್ರಾಮ ವಿಕಾಸ ಸಮಿತಿಯ ಡಾ. ವಿಷ್ಣು ಕುಮಾರ ಸ್ವಾಗತಿಸಿದರು. ಕುಡಿಪ್ಪಾಡಿ ಗ್ರಾಮ ವಿಕಾಸ ಸಮಿತಿಯ ಕಾರ್ಯದರ್ಶಿ ಮನ್ಮತ್ ಶೆಟ್ಟಿ ವಂದಿಸಿದರು. ಸಂಸ್ಕøತ ಉಪನ್ಯಾಸಕ/ ಸಮಿತಿಯ ಮಾಜಿ ಕಾರ್ಯದರ್ಶಿ ಡಾ. ಶ್ರೀಶ ಕುಮಾರ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು