Breaking News : ಮಾಣಿಯಲ್ಲಿ ಬೈಕ್ ಮತ್ತು ಆ್ಯಕ್ಟಿವಾ ಮಧ್ಯೆ ಭೀಕರ ರಸ್ತೆ ಅಪಘಾತ ; ವಿವೇಕಾನಂದ ಡಿಪ್ಲೊಮಾ ವಿದ್ಯಾರ್ಥಿ ಪರೀಕ್ಷಿತ್ ಮತ್ತು ಕಲ್ಲಡ್ಕ ನಿವಾಸಿ ಅಝ್ಮಾನ್ ಮೃತ್ಯು – ಕಹಳೆ ನ್ಯೂಸ್

ವಿಟ್ಲ, ಜ.14. : ಬೈಕ್ ಮತ್ತು ಆ್ಯಕ್ಟಿವಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಮೃತಪಟ್ಟ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಗಳನ್ನು ಕಲ್ಲಡ್ಕ ನಿವಾಸಿ ಅಝ್ಮಾನ್ ಹಾಗೂ ಕೊಡಾಜೆ ನಿವಾಸಿ ವಿವೇಕಾನಂದ ಡಿಪ್ಲೊಮಾ ವಿದ್ಯಾರ್ಥಿ ಪರೀಕ್ಷಿತ್ ಎಂದು ಗುರುತಿಸಲಾಗಿದೆ. ಕಲ್ಲಡ್ಕದಿಂದ ಕೊಡಾಜೆಗೆ ಬರುತ್ತಿದ್ದ ಬೈಕ್ ಹಾಗೂ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಆ್ಯಕ್ಟೀವಾ ನಡುವೆ ಢಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.









