
ಮುಂಬೈ; ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥರ ಹೆಸರನ್ನು ಮುಂಬೈಯ ವೃತ್ತವೊಂದಕ್ಕೆ ಇಡಲಾಗಿದೆ.
ಪರಮಪೂಜ್ಯರ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿದ ಬೃಹತ್ ಮುಂಬೈ ಮಹಾನಗರ ಪಾಲಿಕೆ, ವೃತ್ತವೊಂದಕ್ಕೆ ಶ್ರೀಪಾದರ ಹೆಸರನ್ನಿಡುವ ಮೂಲಕ ಕೃತಜ್ಞತೆ ಸಲ್ಲಿಸಿದೆ. ಕನ್ನಡಿಗ ಸಂತರೊಬ್ಬರ ಹೆಸರಿನ ವೃತ್ತ ಮುಂಬೈನಂತಹ ಮಹಾನಗರದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೆ ಕಾಯುತ್ತಿರುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಚಾರ.









