ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರವ್ಯಾಪಿ ಆಶೀರ್ವಾದದ ದೀಪ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಕಣಿಯೂರು ಗ್ರಾಮದ ಪದ್ಮುಂಜ ಕಲ್ಕುಡ ಮಾಡ ದೈವಸ್ಥಾನದಲ್ಲಿ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ – ಕಹಳೆ ನ್ಯೂಸ್

ಪದ್ಮುಂಜ :ಸೆ 17 ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರವ್ಯಾಪಿ ಆಶೀರ್ವಾದದ ದೀಪ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಕಣಿಯೂರು ಗ್ರಾಮದ ಪದ್ಮುಂಜ ಕಲ್ಕುಡ ಮಾಡ ದೈವಸ್ಥಾನದಲ್ಲಿ ಸೆ 17 ರಂದು ಮೋದಿಯವರಿಗೆ ದೀರ್ಘಾಯುಷ್ಯ ಅರೋಗ್ಯ, ದೇಶವನ್ನು ಇನ್ನಷ್ಟು ವರ್ಷಗಳ ಕಾಲ ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಸಂಕ್ರಮಣ ದ ವಿಶೇಷ ಪೂಜೆಯ ಸಂಧರ್ಭದಲ್ಲಿ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ , ಬಿಜೆಪಿ ಪಕ್ಷದ ಪ್ರಮುಖರು, ಮೋದಿಜೀ ಅಭಿಮಾನಿಗಳು, ಗ್ರಾಮಸ್ಥರು ಭಕ್ತರು ಉಪಸ್ಥಿತರಿದ್ದರು.











