ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನದಲ್ಲಿ ಭಕ್ತರಿಗೆ ವಿಶೇಷ ಸೇವೆಯಾಗಿ “ನಾಳೆ ಬೆಳಗ್ಗಿಂದಲೇ ಮಲ್ಲಿಗೆ, ಹರಕೆ ಅರ್ಪಿಸಲು ಅವಕಾಶ -ಕಹಳೆ ನ್ಯೂಸ್

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಪೂರ್ವ ಸಂಪ್ರದಾಯದಂತೆ ಏ.16 ರಂದು ಸಂಜೆ.4.30ಕ್ಕೆ ಶ್ರೀ ದಂಡನಾಯಕ ಉಳ್ಳಾಳ್ತಿ ದೈವಗಳ ಕಿರುವಾಳು ಭಂಡಾರವು ಬಲ್ನಾಡು ದೈವಸ್ಥಾನದಿಂದ ಹೊರಡಲಿರುವುದು.
ಈ ಹಿನ್ನೆಲೆ ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆಯ ತನಕ ಹಾಗೂ ಸಂಜೆ 3 ರಿಂದ 5 ಗಂಟೆಯ ತನಕ ಮಲ್ಲಿಗೆ ಹೂವು ಮತ್ತು ಹರಕೆ ಅರ್ಪಿಸಿ ಪ್ರಸಾದ ಸ್ವೀಕರಿಸಲು ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿದೆ.









